ಬಾಳುಗೋಡು ಕೆಸರು ಗದ್ದೆ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

0

ವಿಶ್ವ ಯುವಕ ಮಂಡಲ ಬಾಳುಗೋಡು ಇದರ ಆಶ್ರಯದಲ್ಲಿ 2 ನೇ ವರ್ಷದ ಕೆಸರುಗದ್ದೆ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆಯನ್ನು ಸೆ.10 ರಂದು ಬಿಡುಗಡೆ ಮಾಡಲಾಯಿತು.


ಸುಳ್ಯ ವಿಧಾನಸಭಾ ಕ್ಷೇತ್ರ ಕ್ಕೆ ಒಳಪಟ್ಟ ಸೀಮಿತ ತಂಡಗಳ ಕೆಸರುಗದ್ದೆ ವಾಲಿಬಾಲ್ ಹಗ್ಗಜಗ್ಗಾಟ ಹಾಗೂ ಇನ್ನಿತರ ಸ್ಪರ್ಧೆಯು ನಡೆಯಲಿದ್ದು ವಿಶ್ವ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಕಿರಿಭಾಗ
ಅಧ್ಯಕ್ಷತೆಯಲ್ಲಿ ಕ್ರೀಡಾಕೂಟವು ನಡೆಯಲಿರುವುದು. ಗೌರವಾಧ್ಯಕ್ಷ ರಾಧಾಕೃಷ್ಣ ಕಟ್ಟೆಮನೆ ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿ ದರು. ಈ ಸಂದರ್ಭದಲ್ಲಿ
ಗೌರವ ಸಲಹೆಗಾರರಾದ ಪ್ರಸನ್ನ ಗೊರ್ತಿಲ, ಉಪಾಧ್ಯಕ್ಷ ಶಿವಕುಮಾರ್ ಶಿವಾಲ ಕಾರ್ಯದರ್ಶಿ ಅಜೇಯ ಪೊಯ್ಯಮಜಲು, ಖಜಾಂಜಿ ಅನಿಲ್ ಕುಮಾರ್ ಬಿ. ಬಿ. ಪ್ರಮುಖರಾದ ಜಯಂತ ಬಾಳುಗೋಡು,ದಿನೇಶ್ ಕಿರಿಭಾಗ, ನಿತಿನ್ ಬಾಳುಗೋಡು,ಉಲ್ಲಾಸ್ ಮುಚ್ಚಾರ,ಭರತ ಕಿರಿಭಾಗ,ಮಹೇಶ್ ಕಿರಿಭಾಗ, ರವಿಕುಮಾರ್ ಕಿರಿಭಾಗ, ಯಶವಂತ ಬಾಳುಗೋಡು, ಇಂದ್ರೇಶ್ ಬಾಳುಗೋಡು ಹಾಗೂ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.