ಕಲ್ಮಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

0

ಕಲ್ಮಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ನಡೆಯಿತು .ಸಂಘದ ಅಧ್ಯಕ್ಷ ಜೆ.ಹರ್ಷ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ರೂ.1,21,26,863.4 3 ವಾರ್ಷಿಕ ವ್ಯವಹಾರ ನಡೆಸಿದ್ದು ‌ರೂ.1,07,836.91ವಾರ್ಷಿಕ ನಿವ್ವಳ ಲಾಭ ಗಳಿಸಿದೆ. ಲೀಟರ್ ಗೆ ರೂ0.77 ಪೈಸೆ ಬೋನಸ್, ಶೇ.9 ಡಿವಿಡೆಂಡ್ ನೀಡುವುದಾಗಿ ಎಂದು ಅವರು ಹೇಳಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಯಂ ಬಾಲಕೃಷ್ಣ, ನಿರ್ದೇಶಕರಾದ ರವೀಂದ್ರ ಯಂ, ಬೆಳ್ಯಪ್ಪ ಕೆ, ಗಂಗಾಧರ ಭಟ್ ಯನ್, ನಾರಾಯಣ ಕೆ, ಶ್ರೀಮತಿ ಅನುಪಮ , ಹೊನ್ನಪ್ಪ ಗೌಡ, ಯಂ ಜಯ ರೈ, ಶ್ರೀಮತಿ ಯಮುನಾ ಡಿ, ಬಿ ನಾರಾಯಣ ನಾಯ್ಕ,ಕಾರ್ಯದರ್ಶಿ ಶ್ರೀಮತಿ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸಂಘದಲ್ಲಿ 18 ವರುಷ ಅಧ್ಯಕ್ಷರಾಗಿ ಮತ್ತು 10 ವರುಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ರಾಮಮೂರ್ತಿ ರವರನ್ನು ರಮೇಶ್ ಎಡಪತ್ಯ ಸನ್ಮಾನಿಸಿದರು. ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉದಯ ಕುಮಾರ್ ಬೆಟ್ಟ ಸನ್ಮಾನ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಯಂ ಬಾಲಕೃಷ್ಣ ಸ್ವಾಗತಿಸಿದರು. ಸುಧಾ ಕೆ ವಂದಿಸಿದರು .