ಗೂನಡ್ಕ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಮತ ಪ್ರಭಾಷಣ

0

ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಬಿ ಜೆ ಎಂ ಗೂನಡ್ಕ ಇದರ ವತಿಯಿಂದ ಆಯೋಜಿಸಿದ ಸ್ವಲಾತ್ ವಾರ್ಷಿಕ ಮಜ್ಲಿಸ್ ಕಾರ್ಯಕ್ರಮ ಸೆ.14ರಂದು ನಡೆಯಿತು.


ಕಾರ್ಯಕ್ರಮ ದಲ್ಲಿ ಪ್ರಖ್ಯಾತ ವಾಗ್ಮಿ ಬಹು ರಫೀಖ್ ಸಹದಿ ಅಲ್ ಹರ್ಷಿದಿ ದೇಲಂಬಾಡಿ ಯವರು ಉಪನ್ಯಾಸಕರಾಗಿ ಆಗಮಿಸಿದರು. ಬಹು ಅಸ್ಸಯ್ಯದ್ ಜಲಾಲುದ್ದೀನ್ ಕಾಮಿಲ್ ಸಖಾಪಿ ಅಲ್ ಹರ್ಷದಿ ಯವರು ನೇತ್ರತ್ವ ನೀಡಿದರು.


ಗೂನಡ್ಕ ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಞಿ ಗೂನಡ್ಕ ರವರ ಅದ್ಯಕ್ಷತೆಯಲ್ಲಿ ಸ್ಥಳೀಯ ಖತೀಬರಾದ ಬಹು ಅಬೂಬಕ್ಕರ್ ಸಖಾಪಿ ಅಲ್ ಹರ್ಷದಿ ಯವರು ಉದ್ಗಾಟಿಸಿದ ಪ್ರಸ್ತುತ ಕಾರ್ಯಕ್ರಮಗಳಲ್ಲಿ
ಮದ್ರಸಾ ವಿದ್ಯಾರ್ಥಿಗಳಿಗೆ ದಾನಿಯರು ನೀಡಿದ ಸಮವಸ್ತ್ರವನ್ನು ಮತ್ತು ಅಲ್ ಅಮೀನ್‌ ವೆಲ್ಫೇರ್ ಅಸೋಸಿಯೇಷನ್ ಕೊಡುಗೆಯಾಗಿ ನೀಡಿದ ಮದ್ರಸಾ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು ಮತ್ತು ಕುಂಬಕೋಡ್ ಸಹೋದರರು ಮಸೀದಿಗೆ ಕೊಡುಗೆಯಾಗಿ ವಾಗ್ದಾನ ಮಾಡಿದ ಹವಾ ನಿಯಂತ್ರಕದ ಮೊತ್ತವನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮ ದಲ್ಲಿ ಮೊಗರ್ಪಣೆ ಜಮಾಅತ್ ಅದ್ಯಕ್ಷರಾದ
ಹಾಜಿ ಇಬ್ರಾಹಿಮ್ ಸೀ ಪುಡ್ ಗಾಂದಿ ನಗರ ಜಮಾಅತ್ ಅದ್ಯಕ್ಷರಾದ ಕೆ ಮುಹಮ್ಮದ್, ಹಮೀದ್ ಬೀಜಕೊಚ್ಚಿ, ಮುಹಮ್ಮದ್ ಹಮೀದಿಯಾ ಸಂಪಾಜೆ, ಅಬ್ದುಲ್ ರಜಾಕ್ ಕೊಯನಾಡು, ಶಂಸುದ್ದೀನ್ ಪೆಲ್ತಡ್ಕ ಅರಂತೋಡು, ಹಾಜಿ ಅಬ್ದುಲ್ಲಾ ಕೊಪ್ಪದಕಜೆ, ಮಾಜಿ ಅದ್ಯಕ್ಷರು ಗೂನಡ್ಕ ಜಮಾಅತ್, ಜಾಫರ್ ಸಾದಿಖ್ ಕುಂಬಕೊಡ್ ಅದ್ಯಕ್ಷರು ಅಲ್ ಅಮೀನ್ ಗೂನಡ್ಕ, ಆಶಿಖ್ ಕಲ್ಲು ಗುಂಡಿ ಅದ್ಯಕ್ಷರು ಎಸ್ ಎಸ್ ಎಫ್ ಕಲ್ಲುಗುಂಡಿ , ಎಸ್ ಎಂ ಅಬ್ದುಲ್ಲಾ ಕೆಎಂಜೆ ಅದ್ಯಕ್ಷರು ಗೂನಡ್ಕ, ಮುಂತಾದ ಗಣ್ಯರು ಮುಖ್ಯ ಅಥಿತಗಳಾಗಿ ಭಾಗವಹಿಸಿದರು . ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ,
ಕಾರ್ಯದರ್ಶಿ ಅಝರುದ್ದೀನ್ ಚೇರೂರ್ ವಂದಿಸಿದರು
.