ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಸತತ 4ನೇ ಬಾರಿಗೆ ತಾಲೂಕುವಾರು ಉತ್ತಮ ಸಂಘ ದ್ವಿತೀಯ ಪ್ರಶಸ್ತಿ

0

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಕುಲಶೇಖರ ಮಂಗಳೂರು 2023 24ರ ಸಾಲಿನ ಒಕ್ಕೂಟದ 38ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಏನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘವು ಸುಳ್ಯ ತಾಲೂಕಿನ ತಾಲೂಕುವಾರು ಉತ್ತಮ ಸಂಘ ದ್ವಿತೀಯ ಪ್ರಶಸ್ತಿ ಪಡೆದಿರುತ್ತದೆ. ಈ ಪ್ರಶಸ್ತಿಯನ್ನು ಒಕ್ಕೂಟದ ಅಧ್ಯಕ್ಷರಾದ ಕೆಪಿ ಸುಚರಿತ ಶೆಟ್ಟಿ, ಎಸ್.ಬಿ ಜಯರಾಮ ರೈ ಇವರಿಂದ ಏನೆಕಲ್ಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಭರತ್ ನೆಕ್ರಾಜೆ, ಕಾರ್ಯದರ್ಶಿ ಗೀತಾ ಡಿ ಪಡೆದುಕೊಂಡರು.