ಸುಳ್ಯ‌ ಸಿ.ಎ. ಬ್ಯಾಂಕ್ ಮಹಾಸಭೆ

0

ಶತಾಬ್ದಿ‌ ವಿದ್ಯಾರ್ಥಿ ವೇತನ ವಿತರಣೆ : ಪವರ್ ಮೆನ್ ಗಳಿಗೆ ಗೌರವ

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಸಿ.ಎ. ಬ್ಯಾಂಕ್ ) ಇದರ ವಾರ್ಷಿಕ‌ ಮಹಾಸಭೆ ಸೆ.21ರಂದು ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ವಿಕ್ರಂ ಎ.ವಿ. ಅಧ್ಯಕ್ಷತೆ ವಹಿಸಿದ್ದರು.

ಡಿಸಿಸಿ‌ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.‌ಮನ್ಮಥ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.

ನಿರ್ದೇಶಕರುಗಳಾದ. ಎನ್.ಎ ರಾಮಚಂದ್ರ, ಪ್ರಭೋದ್ ಶೆಟ್ಟಿ ಎಂ., ವೆಂಕಟ್ರಮಣ ಎಂ, ಶಿವರಾಮ ಕೇರ್ಪಳ, ವಾಸುದೇವ ನಾಯಕ್ ಪುತ್ತಿಲ, ಶ್ರೀಮತಿ ನವ್ಯ ಚಂದ್ರಶೇಖರ, ಶ್ರೀಮತಿ ಹರಿಣಾಕ್ಷಿ ಬೇಲ್ಯ, ಕೇಶವ ಮಾಸ್ತರ್ ಹೊಸಗದ್ದೆ, ಚಂದ್ರಶೇಖರ ದೊಡ್ಡೇರಿ, ಹೇಮಂತ್ ಕುಮಾರ್ ಕಂದಡ್ಕ, ಬಾಲಗೋಪಾಲ ಸೇರ್ಕಜೆ , ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ವೇದಿಕೆಯಲ್ಲಿ ‌ಇದ್ದರು.

ಲೆಕ್ಕಪರಿಶೋಧಕರಾದ ಗಣೇಶ್ ಭಟ್ ವೇದಿಕೆಯಲ್ಲಿ ಇದ್ದರು.

ಸಮಾರಂಭದಲ್ಲಿ ಶತಾಬ್ದಿ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು. ಮೆಸ್ಕಾಂ ಪವರ್ ಮೆನ್ ಗಳಿಗೆ ಸನ್ಮಾನ ಹಾಗೂ ಡಿಸಿಸಿ ಬ್ಯಾಂಕ್ ‌ನಿರ್ದೇಶಕ ಎಸ್.ಎನ್. ಮನ್ಮಥ ಹಾಗೂ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬಾಲಕೃಷ್ಣ ಪುತ್ಯರನ್ನು‌ ಸನ್ಮಾನಿಸಲಾಯಿತು.

ಮೇಘಕೃಷ್ಣ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಚಂದ್ರಶೇಖರ ‌ನಡುಮನೆ ಸ್ವಾಗತಿಸಿದರು. ತೀರ್ಥರಾಮ ಕೇರ್ಪಳ ಶತಾಬ್ದಿ ವಿದ್ಯಾರ್ಥಿ ಪಟ್ಟಿ ವಾಚಿಸಿದರು.