ಸೆ. 29 : ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಸುಳ್ಯ ಕರಯೋಗಂದಿಂದ ಓಣಂ ಆಚರಣೆ

0

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ವತಿಯಿಂದ ಓಣಂ ಆಚರಣೆ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸೆ.29 ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ.

ಕೆ.ಎನ್.ಎಸ್.ಎಸ್. ಸುಳ್ಯ ಕರಯೋಗಂ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಆರ್. ಮೋಹನ್ ಕುಮಾರ್ ( ಮಾಜಿ ಕಾರ್ಯದರ್ಶಿ, ಎನ್.ಎನ್. ಎಸ್. ಹೊಸದುರ್ಗ, ಕಾಸರಗೋಡು ಕರಯೋಗಂ ) ಡಾ. ಲೀಲಾಧರ ಡಿ.ವಿ. ( ಪ್ರಾಂಶುಪಾಲರು, ಕೆವಿಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ)
ರಾಜನ್ ನಂಬಿಯಾರ್, ( ಬೋರ್ಡ್ ಮೆಂಬರ್, ಕೆ.ಎನ್.ಎಸ್.ಎಸ್. ಮಂಗಳೂರು ಕರಯೋಗಂ) ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವನಾಥನ್ ನಾಯರ್ ಮಧುವನ, ಪ್ರಭಾಕರನ್ ನಾಯರ್ ಸ್ವಾಗತ್,
ಹರಿದಾಸ್ ಪಾಲಡ್ಕ, ಚಂದ್ರಶೇಖರ ನಾಯರ್ ಸುಬ್ರಹ್ಮಣ್ಯ ಅವರಿಗೆ ಗೌರವ ಅಭಿನಂದನೆ ನಡೆಯಲಿದೆ.

ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ನೃತ್ಯ ಗುರು ಬಾಲಕೃಷ್ಣ ನಾಯರ್ ನೀರಬಿದಿರೆ ನಿರ್ದೇಶನದಲ್ಲಿ ‘ ಕೃಷ್ಣ ಲೀಲೆ ‘ ಯಕ್ಷ ವೈಭವ ಕಾರ್ಯಕ್ರಮ ನಡೆಯಲಿದೆ.