ಸುಳ್ಯ: ರೈಟ್ ಟು ಲಿವ್ ಹಾಗೂ ವೇದಾಂತ ಫೌಂಡೇಶನ್ ಸಹಯೋಗದಲ್ಲಿ ವೃತ್ತಿಪರ ತರಬೇತಿ ಕೇಂದ್ರ ಪ್ರಾರಂಭ

0

ರೈಟ್ ಟು ಲಿವ್ ಮತ್ತು ವೇದಾಂತ ಫೌಂಡೇಶನ್ ನಿಂದ ಸುಳ್ಯ ಸರಕಾರಿ ಪದವಿ ಕಾಲೇಜಿನಲ್ಲಿ ಉಚಿತ ವೃತ್ತಿಪರ ಕಂಪ್ಯೂಟರ್ ತರಬೇತಿ ಕೇಂದ್ರವು ಪ್ರಾರಂಭಗೊಂಡಿತು. ಪ್ರಾಂಶುಪಾಲರಾದ ಪ್ರೊ. ಸತೀಶ್ ಕೆ ರವರು ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. ರೈಟ್ ಟು ಲಿವ್ ನ ವೆಂಕಟರಾಜ್ ಉಚಿತ ಕಂಪ್ಯೂಟರ್ ತರಬೇತಿ ಹಾಗೂ ರೈಟ್ ಟು ಲಿವ್ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾಲೇಜಿನ ಉಪನ್ಯಾಸಕರು, ರೈಟ್ ಟು ಲಿವ್ ನ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೈಟ್ ಟು ಲಿವ್ ಮತ್ತು ವೇದಾಂತ ಫೌಂಡೇಶನ್ ಮುಖ್ಯಸ್ಥರು ಹಾಗೂ ಇತರರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು