ಬೆಂಗಳೂರಿನ ವ್ಯಕ್ತಿ ಕಾಣೆ: ಸುಬ್ರಹ್ಮಣ್ಯದ ಆಸುಪಾಸಿನಲ್ಲಿದ್ದರೆ ಮಾಹಿತಿ ನೀಡುವಂತೆ ಮನವಿ

0

ಬೆಂಗಳೂರಿನ ಹೆಸರುಗಟ್ಟ ಗುಡ್ಡದ ಹಳ್ಳಿ ನಿವಾಸಿ ಎಂ.ಎನ್ ಚಂದ್ರಯ್ಯ ಕಾಣೆಯಾಗಿದ್ದು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಕೋರಲಾಗಿದೆ.

ಬೆಂಗಳೂರಿನ ಹೆಸರುಗಟ್ಟ ಗುಡ್ಡದಹಳ್ಳಿ ನಿವಾಸಿ ಎಂ ಎನ್ ಚಂದ್ರಯ್ಯ 23ರ ಆಗಸ್ಟ್ 18ರಂದು ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದಾರೆ. ಆದರೆ ಮತ್ತೆ ಪತ್ತೆಯಾಗಿಲ್ಲ. ಈ ಬಗ್ಗೆ 2023 ಸೆ. 4ರಂದು ಯಶವಂತಪುರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಆಸು ಪಾಸಿನಲ್ಲಿ ಪರಿಚಿತರು ನೋಡಿರುವುದಾಗಿ ಮಾಹಿತಿ ಲಭ್ಯವಾಗಿದ್ದು. ಎಂ.ಎನ್ ಚಂದ್ರಯ್ಯ ಅವರು ನಿವೃತ್ತ ಹೆಡ್ ಕಾನ್ಸ್ ಸ್ಠೇಬಲ್ ಆಗಿದ್ದವರು. ಸುಬ್ರಹ್ಮಣ್ಯ ಆಸುಪಾಸು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ವಿನಂತಿಸಲಾಗಿದ್ದು
ಚಂದ್ರಯ್ಯ ಅವರ ಪುತ್ರ ಆನಂದ ಇವರಿಗೆ ಮಾಹಿತಿ(9886539361) ನೀಡುವಂತೆ ಕೋರಲಾಗಿದೆ.