ಉಬರಡ್ಕ ಯುವಕ ಮಂಡಲದ ಅಧ್ಯಕ್ಷರಾಗಿ ಲೋಕೇಶ್ ಪಟ್ರುಕೋಡಿ, ಪ್ರಧಾನ ಕಾರ್ಯದರ್ಶಿ ಪುನೀತ್ ಪೈಕ. ಕೋಶಾಧಿಕಾರಿ ರಕ್ಷಿತ್ ಉಬರಡ್ಕ

0

ಯುವಕ ಮಂಡಲ ಉಬರಡ್ಕ ಮಿತ್ತೂರು ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ದೇವಪ್ಪ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಸೆ. 22ರಂದು ಉಬರಡ್ಕ ಶ್ರೀ ನರಸಿಂಹ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಯುವಕ ಮಂಡಲದ ಕಾರ್ಯದರ್ಶಿ ಲೋಕೇಶ್ ಪಟ್ರುಕೋಡಿ, ಕೋಶಾಧಿಕಾರಿ ಮನೋಹರ್ ಕಾಚೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2024-2025ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಲೋಕೇಶ್ ಪಟ್ರುಕೋಡಿ, ಉಪಾಧ್ಯಕ್ಷ ಮನೋಹರ ಕಾಚೇಲು,
ಪ್ರಧಾನ ಕಾರ್ಯದರ್ಶಿ ಪುನೀತ್ ಪೈಕ, ಕೋಶಾಧಿಕಾರಿಯಾಗಿ ರಕ್ಷಿತ್ ಉಬರಡ್ಕ, ಜೊತೆ ಕಾರ್ಯದರ್ಶಿ ಧನಂಜಯ ಬರ್ಜೆರಿಗುಂಡಿ,
ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಮಾಣಿಬೆಟ್ಟು, ಸಾಂಸ್ಕೃತಿಕ ಕಾರ್ಯದರ್ಶಿ ಉಮೇಶ್ ಆಚಾರ್ಯ ನೀರಬಿದಿರೆ, ಆಯ್ಕೆಯಾದರು.
ನಿರ್ದೇಶಕರುಗಳಾಗಿ ಸಂದೀಪ್ ರೈ ಉಬರಡ್ಕ, ಯತೀoದ್ರ ಪೈಕ, ಮಿಥುನ್ ರಾಜ್ ನೆಯ್ಯೋಣಿ, ಲೋಲಾಕ್ಷ ನೀರಬಿದಿರೆ, ಗಣೇಶ್ ಭಟ್ ನೆಕ್ಕಿಲ, ವಿನಯ ಯಾವಟೆ,
ಮನೋಹರ ಪಟ್ರುಕೋಡಿ, ಸಂದೀಪ್ ಮುಂಡ್ಯ, ರಮೇಶ್ ಉಬರಡ್ಕ, ಪ್ರವೀಣ್ ಉಬರಡ್ಕ, ದೀಪಕ್ ಪಟ್ರುಕೋಡಿ, ಶರತ್ ನೈಯ್ಯೋಣಿ, ಅರ್ಜುನ್ ಕಂಬಳಿಮೂಲೆ, ಜ್ಞಾನೇಶ್ ಮಾಣಿಬೆಟ್ಟು, ಶ್ರೇಯಸ್ ಕಾಡುತೋಟ, ಗಣೇಶ್ ಬೈತಡ್ಕ
ಶಿವಪ್ರಸಾದ್ ಬಳ್ಳಡ್ಕ, ಭವಿತ್ ಬೆಳರಂಪಾಡಿ ಆಯ್ಕೆಯಾದರು. ಗೌರವಧ್ಯಕ್ಷರಾಗಿ ದೇವಪ್ಪ ಆಚಾರ್ಯ ಕಲ್ಚಾರ್ ಹಾಗೂ
ಗೌರವ ಸಲಹೆಗಾರರಾಗಿ ರಾಜೇಶ್ ಭಟ್ ನೆಕ್ಕಿಲ ಹರೀಶ್ ಉಬರಡ್ಕ, ರಾಜೇಶ್ ರೈ ಉಬರಡ್ಕ, ಗಂಗಾಧರ್ ಭರ್ಜೆರಿಗುಂಡಿ, ವಿಜಯಕುಮಾರ್ ಉಬರಡ್ಕ ಇವರುಗಳನ್ನು ಮಾಡಲಾಯಿತು. ರಾಜೇಶ್ ರೈ ಉಬರಡ್ಕ ಸ್ವಾಗತಿಸಿ. ಪುನೀತ್ ಪೈಕ ವಂದಿಸಿದರು.