ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮರಣ ಸಾಂತ್ವನ ನಿಧಿ ಹಸ್ತಾಂತರ

0

ಅರಂತೋಡು ಗ್ರಾಮದ ಸಾತ್ವಿಕ ಬಿಳಿಯಾರು ಲಿಂಗಪ್ಪ ಗೌಡ ಹಾಗೂ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ರಮಾ ವೈ.ಕೆ. ದಂಪತಿಗಳು ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮರಣ ಸಾಂತ್ವನ ನಿಧಿಗೆ ರೂ.10 ಸಾವಿರವನ್ನು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರಿಗೆ ಸೆ.24ರಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ನಿರ್ದೇಶಕರಾದ ಕುಸುಮಾಧರ ಅಡ್ಕಬಳೆ, ಮಾಜಿ ಜಿ.ಪಂ. ಸದಸ್ಯ ನತೀಶ ನಾಯ್ಕ, ಸಿಬ್ಬಂದಿಗಳಾದ ನಯನ ಕಿರ್ಲಾಯ, ಅರ್ಜುನ್ ಬನ, ಪ್ರದೀಪ್ ಕುಮಾರ್, ಕಿರಣ ಕುಂಟುಕಾಡು ಉಪಸ್ಥಿತರಿದ್ದರು .