ಹೊರ ದೇಶದಿಂದ ಅಡಿಕೆ‌ ಆಮದು – ಅಡಿಕೆ ಬೆಳೆಗಾರರಿಗೆ ಅನ್ಯಾಯ

0

ಈ ಕುರಿತು ಕೇಂದ್ರ ಸರಕಾರ ಮರು ಪರೀಶಿಲನೆ ನಡೆಸಲಿ : ಜಿ.ಕೃಷ್ಣಪ್ಪ

ಭೂತನ್ ನಿ.ದ ಭಾರತಕ್ಕೆ ಅಡಿಕೆ ಆಮದಿನಿಂದ ಇಲ್ಲಿಯ ಅಡಿಕೆ‌ಬೆಳೆಗಾರರಿಗೆ ಅನ್ಯಾಯವಾಗಲಿದೆ.‌ ಈ ಕುರಿತು ಕೇಂದ್ರ ಸರಕಾರ ಮರುಪರಿಶೀಲನೆ ಮಾಡಬೇಕೆಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಹೇಳಿದ್ದಾರೆ.

ಹೊರಗಿನ ದೇಶದಿಂದ ನಮ್ಮ ದೇಶಕ್ಕೆ ಅಡಿಕೆ ಆಮದು ಮಾಡಿದರೆ ಇಲ್ಲಿಯ ರೈತರಿಗೆ ಅನ್ಯಾಯವಾದಂತೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಅಡಿಕೆ ಕೃಷಿಯನ್ನು ನಂಬಿ ಎಷ್ಟೋ‌ ಕುಟುಂಬಗಳು ಜೀವನ ಸಾಗಿಸುತ್ತಿವೆ. ಈ ಕುರಿತು ಕೇಂದ್ರ ಸರಕಾರ ಮರು ಚಿಂತನೆ ನಡೆಸಬೇಕು. ಈ ಎರಡು‌ ಜಿಲ್ಲೆಗೆ ಅಡಿಕೆ ಬೆಳೆಗಾರರು ಬೆಳೆಯುವ ಅಡಿಕೆಗೆ ನಿರ್ಧಿಷ್ಟ ಬೆಲೆ ಸಿಗದಿದ್ದರೆ ಪ್ರತಿಭಟನೆಯ ಮೂಲಕ ನ್ಯಾಯಕ್ಕೆ ಆಗ್ರಹಿಸಬೇಕಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.