ಗುತ್ತಿಗಾರು ರಬ್ಬರ್ ಸೊಸೈಟಿ ವಾರ್ಷಿಕ ಮಹಾಸಭೆ

0

ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ. 19 ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸರೋಜಿನಿ ಮುಳುಗಾಡು, ಸಂಘದ ನಿರ್ದೇಶಕರುಗಳಾದ ಮಹೇಶ್ ಮುತ್ಲಾಜೆ, ಭರತ್ ನೆಕ್ರಾಜೆ ಲೋಕೇಶ್ವರ ಡಿ.ಅರ್, ಹರೀಶ್ ಚಿಲ್ತಡ್ಕ, ದುರ್ಗಾದಾಸ್ ಮೆತ್ತಡ್ಕ, ಹೊನ್ನಪ್ಪ ಗೌಡ ಚಿರೆಕಲ್ಲು, ಕರುಣಾಕರ ಹೊಸಳ್ಳಿ, ಮಹಾಲಿಂಗ ನಾಯ್ಕ ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ವರದಿ ವಾಚಿಸಿ ಸಂಘದ ವ್ಯವಹಾರ ಬಗ್ಗೆ ಮಾಹಿತಿ ನೀಡಿದರು. ಭರತ್ ನೆಕ್ರಾಜೆ ಸ್ವಾಗತಿಸಿ, ಲೋಕೇಶ್ವರ ಡಿ.ಆರ್ ವಂದಿಸಿದರು. ಶಿವಪ್ರಸಾದ್ ಹಾಲೆಮಜಲು ಕಾರ್ಯಕ್ರಮ ನಿರೂಪಿಸಿದರು.