ಅಗಲಿದ ಸೌಧಾಮಿನಿ ಟೀಚರ್ ಮಧುವನ ಅವರಿಗೆ ನುಡಿ ನಮನ

0


ಸೌಧಾಮಿನಿ ಟೀಚರ್ ಅವರದ್ದು ಮಾದರಿ ವ್ಯಕ್ತಿತ್ವ : ವಿಶ್ವನಾಥನ್ ನಾಯರ್


ಸೆ. ೧೨ರಂದು ನಿಧನರಾದ ಶ್ರೀಮತಿ ಸೌಧಾಮಿನಿ ಶಂಕರನ್ ನಂಬಿಯಾರ್ ಅವರ ವೈಕುಂಠ ಸಮಾರಾಧನೆ ಮತ್ತು ನುಡಿನಮನ ಕಾರ್ಯಕ್ರಮವು ಇಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ನುಡಿನಮನ ಸಲ್ಲಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ವಿಶ್ವನಾಥನ್ ನಾಯರ್ ಅವರು, ಕೌಟುಂಬಿಕ ಬದುಕು, ವೃತ್ತಿ ಬದುಕಿನ ಜೊತೆಗೆ ಕಲಾ ಬದುಕನ್ನೂ ರೂಢಿಸಿಕೊಂಡಿದ್ದ ಸೌಧಾಮಿನಿ ಟೀಚರ್ ಅವರು ಎಲ್ಲರಿಗೂ ಪ್ರೇರಣೆ ಮತ್ತು ಮಾದರಿಯಾದವರು. ತನ್ನ ವೃತ್ತಿಗೆ ಘನತೆ ತಂದುಕೊಟ್ಟವರು. ನೂರಾರು ಶಿಷ್ಯಂದಿರನ್ನು ಬೆಳೆಸಿದವರು. ಕೌಟುಂಬಿಕ ಬದುಕಿನಲ್ಲೂ ಎಲ್ಲರೊಂದಿಗೆ ಅನ್ಯೋನ್ಯವಾಗಿ ಮಾದರಿಯಾದವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೌಧಾಮಿನಿ ಟೀಚರ್‌ರವರು ತಾನು ಬಾಲ್ಯಕಾಲದಲ್ಲಿ ರಚಿಸಿದ ಚಿತ್ರಕಲೆ ಹಾಗೂ ಕಸೂತಿ ಕಲೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಸೌಧಾಮಿನಿ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಹೋದರರಾದ ರಾಘವನ್ ನಾಯರ್ ರಾಮಲ್‌ಕಟ್ಟೆ, ಪದ್ಮನಾಭನ್ ನಾಯರ್ ಮಧುವನ, ಭಾಸ್ಕರನ್ ನಾಯರ್ ಮಧುವನ, ಸಹೋದರಿಯರಾದ ಮೀನಾಕ್ಷಿ ನಾಯರ್ ಪನೆಯಾಲ್, ಶಶಿಕಲಾ ಪ್ರಭಾಕರನ್ ನಾಯರ್ ಸ್ವಾಗತ್, ಅಳಿಯ ಪ್ರಭಾಕರನ್ ನಾಯರ್ ಸಿ.ಎಚ್.,, ಪುತ್ರಿಯರಾದ ಶ್ರೀದೇವಿ ರಾಜೇಂದ್ರನ್ ಕಣ್ಣೂರು, ಶಕುಂತಳಾ ಕೃಷ್ಣನ್ ಕುತ್ತಮೊಟ್ಟೆ, ವಾಣಿ ರಮೇಶ್ ಮಧುವನ, ಬಂಧುಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.