ಸುಳ್ಯ ಸುನ್ನಿ ಸಂಯುಕ್ತ ಜಮಾಅತ್ ವತಿಯಿಂದ ತಾಜುಲ್ ಉಲಮಾ ಉಳ್ಳಾಲ ತಂಙಳ್ ಉರೂಸ್ ಮುಬಾರಕ್ ಪ್ರಚಾರ ಪೋಸ್ಟರ್ ಬಿಡುಗಡೆ

0

ಕೇರಳದ ಎಟ್ಟಿಕುಳಂ ನಲ್ಲಿ ಅಕ್ಟೊಬರ್ 4 ರಿಂದ 6 ರವರೆಗೆ ನಡೆಯಲಿರುವ ತಾಜುಲ್ ಉಲಮಾ ಉಳ್ಳಾಲತಂಙಳ್ ರವರ11ನೇಉರೂಸ್ ಮುಬಾರಕ್ ಇದರ ಪ್ರಚಾರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಸೆ 24 ರಂದು ಸುಳ್ಯ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ವತಿಯಿಂದ ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ವಹಿಸಿದ್ದರು.
ಮೊಗರ್ಪ ಣೆ ಜುಮಾ ಮಸೀದಿ ಖತೀಬ್ ರವರಾದ ಬಹು ಶೌಕತ್ತಲಿ ಸಖಾಫಿ ಯವರು ದುವಾ ನೆರವೇರಿಸಿಉದ್ಘಾಟನೆ ಮಾಡಿದರು.

ವೇದಿಕೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಹಮೀದ್ ಬೀಜಕೊಚ್ಚಿ,ಕೋಶಾಧಿಕಾರಿ ಹಾಜಿ ಕೆ ಎಂ ಮುಸ್ತಫಾ ಜನತಾ, ಗಾಂಧಿನಗರ ಕೇಂದ್ರ ಮಸೀದಿ ಜಮಾಅತ್ ಅಧ್ಯಕ್ಷ ಹಾಜಿ ಮಹಮ್ಮದ್ ಕೆ ಎಂ ಎಸ್, ಮೊಗರ್ಪಣೆ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ಉಪಸ್ಥಿತರಿದ್ದರು.

ಈ ಸಂಧರ್ಭ ಮಾತನಾಡಿದ ಮುಖಂಡರುಗಳು ಉಳ್ಳಾಲ ತಾಜುಲ್ ಉಲಮಾ ಅಬ್ದುಲ್ ರಹಿಮಾನ್ ಬುಖಾರಿ ತಂಙಳ್ ರವರು ಆಧ್ಯಾತ್ಮಿಕ ಪಂಡಿತರು ಮತ್ತು ಉಲಮಾ ನೇತಾರರು ಆಗಿದ್ದರು. ಸಾವಿರಾರು ಶಿಷ್ಯಗಣರನ್ನು ಹೊಂದಿದ್ದ ಅವರು ಸುಳ್ಯ ತಾಲೂಕಿನ ಹಲವಾರು ಮಸೀದಿಗಳ ಖಾಝಿ ಯಾಗಿ ಸೇವೆ ಸಲ್ಲಿಸಿದವರು.
ಇವರು ಸುಳ್ಯಕ್ಕೆ ನೀಡಿದ್ದ ಸೇವೆಯನ್ನು ಆಧರಿಸಿ ಕೇರಳದ ಎಟ್ಟಿಕ್ಕುಳಮ್ ನಲ್ಲಿ ಅಕ್ಟೊಬರ್ 4 ರಿಂದ 6 ರ ವರೆಗೆ ನಡೆಯುವ ಉರೂಸ್ ಸಮಾರಂಭಕ್ಕೆ ಪೂರ್ಣ ಸಹಕಾರ ನೀಡಲು ತೀರ್ಮಾನ ಕೈ ಗೊಂಡಿದ್ದೇವೆ. ಅವರ ಎಲ್ಲಾ ಅಭಿಮಾನಿಗಳು ಸಹಕಾರ ನೀಡಿ ಸಹಕರಿಸ ಬೇಕಾಗಿದೆ ಎಂದರು.

ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಭಾಗವಹಿಸಿದ್ದರು.
ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದ ಕ ಜಿಲ್ಲಾ ವಖ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರೈಮಾನ್ ಮೊಗರ್ಪಣೆ ವಂದಿಸಿದರು.