ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಶುಚಿತ್ವ ಕಾರ್ಯಕ್ರಮ

0

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಕೊಡಿಯಾಲಬೈಲು ಬಸ್ ನಿಲ್ದಾಣವನ್ನು ಶುಚಿಗೊಳಿಸಲಾಯಿತು.

ಎನ್ ಎಸ್ ಎಸ್ ದಿನಾಚರಣೆಯ ಅಂಗವಾಗಿ ಸ್ವಚ್ಛತಾಹಿ ಸೇವಾ ಎಂಬ ಶೀರ್ಷಿಕೆಯಡಿ ಒಟ್ಟು 15 ದಿನಗಳ ಕಾಲ ಸೇವಾ ಚಟುವಟಿಕೆ ನಡೆಯಲಿದ್ದು ಈದಿನ ಕೊಡಿಯಾಳಬೈಲು ಬಸ್ ನಿಲ್ದಾಣ ಹಾಗೂ ಅದರ ಸುತ್ತಮುತ್ತ ಶುಚಿಗೊಳಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್, ಎನ್ ಎಸ್ ಎಸ್ ಘಟಕಾಧಿಕಾರಿಗಳಾದ ರಾಮಕೃಷ್ಣ ಕೆ ಎಸ್ ಹಾಗೂ ಲತಾ ಮಾರ್ಗದರ್ಶನ ಮಾಡಿದರು.