ಉಪನ್ಯಾಸಕಿ ಸುನಂದ ಪೂಜಾರಿಯವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಸುಳ್ಯದ ಬೀರಮಂಗಲ ನಿವಾಸಿ ಕೆಯ್ಯೂರು ಕೆಪಿಎಸ್ ನ ಪದವಿಪೂರ್ವ ವಿಭಾಗದ ಅತಿಥಿ ಉಪನ್ಯಾಸಕಿಯಾಗಿದ್ದ ಸುನಂದ ಪೂಜಾರಿಯವರು ಸೆ.12 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಸುಳ್ಯದ ಅಂಬಟೆಡ್ಕ ವೆಂಕಟರಮಣ ದೇವ ಮಂದಿರದ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ಸೆ.29 ರಂದು ನಡೆಯಿತು.


ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ ಕಾಂತಮಂಗಲ ,ಪೆರುವಾಜೆ ಕಾಲೇಜಿನ ಉಪನ್ಯಾಸಕ ಪ್ರೊ.ಕಾಂತರಾಜುರವರು ದಿ.ಸುನಂದ ಪೂಜಾರಿಯವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.


ಕುಟುಂಬದ ಪರವಾಗಿ ಆನಂದರವರು ನುಡಿನಮನ ಸಲ್ಲಿಸಿದರು. ನವೀನ್ ಕುಮಾರ್ ಸಾರಕರೆಯವರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಅಗಮಿಸಿದ ನೂರಾರು ಜನ ಗಣ್ಯರು ದಿ.ಸುನಂದ ಪೂಜಾರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತಿ ಬಂಟ್ವಾಳದ ಕಾಮಾಜೆ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ.ಅಚ್ಚುತ ಪೂಜಾರಿ, ಪುತ್ರಿಯರಾದ ಕು.ಅನನ್ಯ,ಕು.ಅಮೂಲ್ಯ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.