ಗಾಂಧಿ‌ಜಯಂತಿ ಪ್ರಯುಕ್ತ ಪಯಸ್ವಿನಿ ಯುವಕ ಮಂಡಲದಿಂದ ಸ್ವಚ್ಚತಾ ಅಭಿಯಾನ

0

ಸ್ವಚ್ಛತೆಯ ಜಾಗೃತಿ ‌ನಿರಂತರ : ಡಾ.ಗಿರೀಶ್ ಭಾರದ್ವಾಜ್

ಅ.2 ರ ಗಾಂಧಿ ಜಯಂತಿ ಪ್ರಯುಕ್ತ ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ಆಶ್ರಯದಲ್ಲಿ ಸ್ವಚ್ಚತಾ ಅಭಿಯಾನ ಭಸ್ಮಡ್ಕ ಜಂಕ್ಷನ್ ನಿಂದ ಕೆ.ವಿ.ಜಿ. ಕ್ಯಾಂಪಸ್ ರಸ್ತೆಯ‌ ತನಕ ನಡೆಯಿತು.

ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ರವರು ಅಭಿಯಾನಕ್ಕೆ ಚಾಲನೆ ನೀಡಿ, ಯುವಕ ಸಂಘಗಳ ಸ್ವಚ್ಚತಾ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಎಲ್ಲೆಂದರಲ್ಲಿ ಕಸ ಹಾಕದಂತೆ ಜಾಗೃತಿ ಕಾರ್ಯವನ್ನು ನಿರಂತರ ವಾಗಿ ಮಾಡಬೇಕಾಗಿದೆ ಎಂದು ಹೇಳಿದರು.

ಯುವಕ ಮಂಡಲದ ಅಧ್ಯಕ್ಷ ಭರತ್ ಕುರುಂಜಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಮಂಡಲ ಪ್ರಧಾನರಾದ ಕೆ.ಸಿ.ಸದಾನಂದ ಹಾಗೂ ಸುಳ್ಯ ಸಿ.ಎ.ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ ಶುಭಹಾರೈಸಿದರು.

ಸುಳ್ಯ‌ ನಗರ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಪೂಜಿತಾ ಕೆ.ಯು., ಸುಧಾಕರ ಕುರುಂಜಿಭಾಗ್, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಕೆ.ಸಿ.ಶಿವಾನಂದ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಅರೆಭಾಷೆ ಅಕಾಡೆಮಿ ಸದಸ್ಯ ಡಾ.ಎನ್.ಎ.‌ಜ್ಞಾನೇಶ್, ಮೇದಪ್ಪ ಗೌಡ ನೆಕ್ರಾಜೆ, ವಸಂತ (ಬೃಂದ) ಕುರುಂಜಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಉಪನ್ಯಾಸಕ ಶ್ರೀಧರ, ಗಂಗಾಧರ್ ಕುರುಂಜಿ, ಪುರುಷೋತ್ತಮ ಭಸ್ಮಡ್ಕ, ನಗರ ಗೌಡ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ಯುವಕ ಮಂಡಲದ ಕಾರ್ಯದರ್ಶಿ ಹೇಮಪ್ರಕಾಶ ಕುಂತಿನಡ್ಕ ಪದಾಧಿಕಾರಿಗಳು, ಊರವರು ಸಹಿತ ಸುಮಾರು 75 ಮಂದಿ ಭಾಗವಹಿಸಿದ್ದರು.

ವಿನ್ಯಾಸ ಕುರುಂಜಿ ಸ್ವಾಗತಿಸಿದರು. ಲಕ್ಷ್ಮೀಶ್ ದೇವರಕಳಿಯ ವಂದಿಸಿದರು. ಚಂದ್ರಶೇಖರ ಕೇರ್ಪಳ ‌ಕಾರ್ಯಕ್ರಮ ನಿರೂಪಿಸಿದರು.