ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರಮದಾನ

0


ಸ ಹಿ ಪ್ರಾ ಶಾಲೆ ಮುರುಳ್ಯ ಶಾಲಾ ಸ್ಕೌಟ್ಸ್ , ಗೈಡ್ಸ್ , ಕಬ್ಸ್ , ಬುಲ್ ಬುಲ್ ಮಕ್ಕಳಿಂದ ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಶ್ರಮ ಸೇವೆ ಮಾಡಲಾಯಿತು. ಗೈಡ್ಸ್ ಶಿಕ್ಷಕಿಯರಾದ ಶ್ರೀಮತಿ , ನಳಿನಾಕ್ಷಿ ಬಿ ಮತ್ತು ಶ್ರೀಮತಿ, ಮಿಥುನಾಕ್ಷಿ ಎಂ. ಇವರ ನೇತೃತ್ವದಲ್ಲಿ ಶಾಲಾ ಮುಖ್ಯಗುರುಗಳಾದ ಶ್ರೀಮತಿ , ಶಶಿಕಲ, ಎಸ್‌ಡಿಎಂಸಿ ಅಧ್ಯಕ್ಷ ಅವಿನಾಶ್ ಡಿ., ಉಪಾಧ್ಯಕ್ಷೆ ಶ್ರೀಮತಿ ಸವಿತಾ ಕೆ. ಇವರ ಸಹಕಾರದೊಂದಿಗೆ ಸ್ಕೌಟ್ಸ್ ವಿದ್ಯಾರ್ಥಿಗಳು ಮಾಡಲೇಬೇಕಾದ ಸಮುದಾಯ ಸೇವಾ ಕಾರ್ಯವನ್ನು ಕೈಗೊಳ್ಳಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಸಂತ ನಡುಬೈಲು ಉಪಸ್ಥಿತರಿದ್ದು , ಶಿಕ್ಷಕಿಯರ , ಎಸ್‌ಡಿಎಂಸಿ ಯವರ ಹಾಗೂ ವಿದ್ಯಾರ್ಥಿಗಳ ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು . ನಮ್ಮ ಶಾಲೆಗೆ ಈ ಒಂದು ಅವಕಾಶವನ್ನು ಒದಗಿಸಿದ ದೇವಸ್ಥಾನದ ಆಡಳಿತ ಮಂಡಳಿಗೆ ಶಾಲಾ ವತಿಯಿಂದ ಕೃತಜ್ಞತೆ ತಿಳಿಸಲಾಯಿತು .