ಸಂಪಾಜೆ: ಮಾದವ ಗೌಡ ಕಡಪಾಲ ಶ್ರದ್ಧಾಂಜಲಿ ಸಭೆ

0

ದ.ಕ. ಸಂಪಾಜೆ ಗ್ರಾಮದ ಕಡಪಾಲ ದಿ. ಮಾದವ ಗೌಡರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯು ಅ.2ರಂದು ನಡೆಯಿತು.

ಸಂಪಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಪಿ. ಜಗದೀಶ್ ಕುಯಿಂತೋಡು ಅವರು ದಿ. ಮಾದವ ಗೌಡರು ಸಂಪಾಜೆ ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ ಸಲ್ಲಿಸಿದ್ದ ಸೇವೆಯನ್ನು ಸ್ಮರಿಸಿ, ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಕುಸುಮ, ಸಹೋದರಿ ಶ್ರೀಮತಿ ಜಯಲಕ್ಷ್ಮಿ, ಪುತ್ರರಾದ ಗೋಪೀಶ ಮತ್ತು ಧನರಾಜ್, ಪುತ್ರಿ ಶ್ರೀಮತಿ ತೇಜಸ್ವಿ ರಾಜೇಶ್ ಸೇರಿದಂತೆ ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.