ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಪ್ರಯುಕ್ತ ಪೂರ್ವಭಾವಿ ಸಭೆ

0

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಜರುಗಲಿರುವ ಕಾರ್ತಿಕ ದೀಪೋತ್ಸವದ ಕುರಿತು ಪೂರ್ವಭಾವಿ ಸಭೆಯು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅ.12ರಂದು ನಡೆಯಿತು.

ದೇವಸ್ಥಾನದ ಆಡಳಿತಾಧಿಕಾರಿ ಚಂದ್ರಕಾಂತ ಎಂ‌. ಆರ್. ಅವರು ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ 2024ರ ಕಾರ್ತಿಕ ದೀಪೋತ್ಸವ ಸಮಿತಿ ಹಾಗೂ ಉಪಸಮಿತಿಗಳನ್ನು ನೇಮಕ ಮಾಡಲಾಯಿತು.
ಸಮಿತಿಯ ಸಂಚಾಲಕರಾಗಿ ಚಂದ್ರಶೇಖರ ಅಡ್ಪಂಗಾಯ , ಭಜನಾ ಸಂಚಾಲಕರಾಗಿ ದೇವಿ ಪ್ರಸಾದ್ ಜಿ.ಸಿ., ಭಜನಾ ಸಮಿತಿ ಸದಸ್ಯರಾಗಿ ದೇವಿಪ್ರಸಾದ್ ಪ್ರಭು, ದೀಪಕ್ ಆಚಾರ್ಯ, ದೇವಿಪ್ರಸಾದ್ ಕುದ್ಪಾಜೆ ಅವರನ್ನು ನೇಮಕ ಮಾಡಲಾಯಿತು.
ಆರ್ಥಿಕ ಸಮಿತಿಯ ಸಂಚಾಲಕರಾಗಿ ಸದಾನಂದ ಮೂಲೆಮಜಲು, ಸದಸ್ಯರುಗಳಾಗಿ ವಿಠಲ ಗೌಡ ಬಾಣೂರು, ಬೆಳ್ಯಪ್ಪ ಗೌಡ ಬಳ್ಳಡ್ಕ, ದಾಮೋದರ ಅಟಲ್ ನಗರ, ಕೃಷ್ಣ ಬೆಟ್ಟ ಕಾಯರ್ತೋಡಿ, ಪಿ.ಕೆ. ಉಮೇಶ್, ಕುಸುಮಾಧರ ಎ.ಟಿ. ನೇಮಕಗೊಂಡರು.
ಆಹಾರ ಸಮಿತಿ ಸಂಚಾಲಕರಾಗಿ ನವೀನ್ ಕುದ್ಪಾಜೆ, ಸದಸ್ಯರಾಗಿ ತೀರ್ಥರಾಮ ನಡುಮನೆ, ಅನಿಲ್ ರಾಜ್, ಶೀನಪ್ಪ ಪಡ್ರೆ, ನಾರಾಯಣ ಆಚಾರ್ಯ, ಪ್ರಶಾಂತ ಆಚಾರ್ಯ, ಪರಮೇಶ್ವರ, ಜಗದೀಶ್ ಕೆ.ಎಲ್. ನೇಮಕಗೊಂಡರು.

ಕಾರ್ತಿಕ ಪೂಜೆಯ ಸಮಯದಲ್ಲಿ ವಾರದಲ್ಲಿ ಐದು ದಿನ ಫಲಹಾರ ಮತ್ತು ಎರಡು ದಿನ ಭೋಜನ ವ್ಯವಸ್ಥೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.