ಸುಳ್ಯ ರೋಟರಿ ಕ್ಲಬ್ ವತಿಯಿಂದ ಪುತ್ತೂರಿನ ಪ್ರಜ್ಞಾ ಟ್ರಸ್ಟ್ ನ ವಿಶೇಷ ಚೇತನರಿಗೆ ಧನಸಹಾಯ

0

ಸುಳ್ಯ ರೋಟರಿ ಕ್ಲಬ್ ವತಿಯಿಂದ ಝೋನಲ್ ಲೆಫ್ಟಿನೆಂಟ್ ರೊ. ಪ್ರಭಾಕರನ್ ನಾಯರ್ ಕೆ ರವರ ಪ್ರಾಯೋಜಕತ್ವದಲ್ಲಿ ಪುತ್ತೂರಿನ ಪ್ರಜ್ಞಾ ಟ್ರಸ್ಟ್ ನ ವಿಶೇಷ ಚೇತನರಿಗೆ ಧನಸಹಾಯ, ಹಣ್ಣು ಹಂಪಲುಗಳನ್ನು ನೀಡಲಾಯಿತು.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೊ‌. ಯೋಗಿತ ಗೋಪಿನಾಥ್, ಝೋನಲ್ ಲೆಫ್ಟಿನೆಂಟ್ ರೊ. ಪ್ರಭಾಕರನ್ ನಾಯರ್ ಕೆ, ಶ್ರೀಮತಿ ಶಶಿಕಲಾ ಎಂ.ಆರ್, ಕಾರ್ಯದರ್ಶಿ ರೊ. ಡಾ ಹರ್ಷಿತ ಪುರುಷೋತ್ತಮ್, ರೊ. ಪ್ರಭಾಕರನ್ ನಾಯರ್ ಸಿ.ಹೆಚ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.