ಕೆ.ವಿ.ಜಿ.ಐ.ಟಿ.ಐ ಕಾಲೇಜ್ ಉಪನ್ಯಾಸಕ ಗಿರೀಶ್ ಕೇಕುಣ್ಣಾಯ ನಿಧನ

0

ಅಜ್ಜಾವರ ಗ್ರಾಮದ ಕೆರೆಮೂಲೆ ದಿ.ಕೃಷ್ಣ ಕೇಕುಣ್ಣಾಯ ರವರ ಪುತ್ರ ಸುಳ್ಯ ಕೆ.ವಿ.ಜಿ.ಐ.ಟಿ.ಐ ಕಾಲೇಜಿನ ಉಪನ್ಯಾಸಕ ಗಿರೀಶ್ ಕೇಕುಣ್ಣಾಯ ರವರು ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.

ಮೃತರು ಕೆಲ ಸಮಯಗಳಿಂದ ಕರುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.
ಮೃತರು ತಾಯಿ ಶ್ರೀಮತಿ ಸತ್ಯಭಾಮೆ, ಪತ್ನಿ ಶ್ರೀಮತಿ ಶೋಭಾ, ಪುತ್ರ ಮಾ| ಆದಿತ್ಯ, ಪುತ್ರಿಯರಾದ ಶ್ವೇತಾ,ನಂದಿತಾ ಹಾಗೂ ಕುಟುಂಬಸ್ಥರನ್ನು , ಬಂಧು ಮಿತ್ರರನ್ನು ಅಗಲಿದ್ದಾರೆ.


ಮೃತರು ಪ್ರಸ್ತುತ ಐ.ಟಿ.ಐ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಯಾಗಿ ಮತ್ತು ಪ್ರಸ್ತುತ ಕಾರ್ಯದರ್ಶಿಯಾಗಿದ್ದರು.