ನಾಲ್ಕೂರು ಗ್ರಾಮದ ಕಲ್ಲಾಜೆ ನಿವಾಸಿ ಚಿದಾನಂದ ಗೌಡ ಅಂಬೆಕಲ್ಲು ಫೆ.8 ರಂದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಕೆಲ ದಿನಗಳಿಂದ ಅಸೌಖ್ಯತೆ ಉಂಟಾಗಿದ್ದು ಇತ್ತೀಚೆಗೆ ಅಸೌಖ್ಯತೆ ಹೆಚ್ಚಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ದಮಯಂತಿ, ಮಕ್ಕಳಾ ಏಕಲವ್ಯ, ಹರ್ಷ, ಶ್ರೀಮತಿ ತಾರಾ ಪುರುಷೋತ್ತಮ ಉಳುವಾರು , ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.