ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನಿವಲ್ ಮಾಡುವ ಕ್ಯಾಂಪ್

0

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನಿವಲ್ ಮಾಡುವ ಕ್ಯಾಂಪ್ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಂಟಿಯಾಗಿ ನಡೆಯಿತು.

ತಾಲೂಕು ಪಂಚಾಯತ್ ಎಂ ಆರ್ ಡಬ್ಲ್ಯೂ ಚಂದ್ರ ಶೇಖರ್, ನಗರ ಪಂಚಾಯತ್ ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್, ವಿ ಆರ್ ಡಬ್ಲ್ಯೂ ರವರಾದ ಉಮ್ಮರ್,ಪುಷ್ಪಶ್ರೀ, ಲಿಖಿತ,ಹರಿಣಿ, ಮೇಘ ಶ್ರೀ, ದಾದಿ ನಯನ ಫಿಸಿಯೋ ಟೆರೇಪಿಸ್ಟ್ ನಿಶಾ ಮತ್ತು ವೈದ್ಯಾಧಿಕಾರಿ ಡಾ.ಕರುಣಾಕರ್ ಅವರ ನೇತ್ರತ್ವದಲ್ಲಿ ತಜ್ಞ ವೈದ್ಯರು ಹಾಜರಿದ್ದು ಸಹಕಾರ ನೀಡಿದರು. ಹಲವಾರು ಜನ ಇದರ ಪ್ರಯೋಜನ ಪಡೆದುಕೊಂಡರು.