ಚಿಲ್ತಡ್ಕ ಜತ್ತಪ್ಪ ಮಾಸ್ತರ್ ರಿಗೆ ಸನ್ಮಾನ

0

ನಾಲ್ಕೂರು ಗ್ರಾಮದ ಚಿಲ್ತಡ್ಕ ಬಳಿಯ ಜತ್ತಪ್ಪ ಮಾಸ್ತರ್ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮವು ಇತ್ತೀಚೆಗೆ
ಅವರ ಸ್ವಗ್ರಹದಲ್ಲಿ ನಡೆಯಿತು.

ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ತೊಡಗಿಸಿಕೊಂಡು ಬಂದಿರುವ ಹಿರಿಯ ನಾಗರಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಂಗಳೂರಿನ ಮರೋಳಿ ಬಳಿಯ ನಿವಾಸಿ ತಾರಸಿ ಕೃಷಿಕ ಡಾ| ಕೃಷ್ಣಪ್ಪಗೌಡ ಪಡ್ಡಂಬೈಲ್ ರವರು ಕಳೆದ ಹಲವಾರು ವರ್ಷಗಳಿಂದ ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಈ ನಿಟ್ಟಿನಲ್ಲಿ ಸುಳ್ಯದ ಚಿತ್ತಡ್ಕ ಬಳಿಯಲ್ಲಿರುವ ಆವರ ಸ್ವಗ್ರಹಕ್ಕೆ ತೆರಳಿ ಸನ್ಮಾನಿಸುವ ಮೂಲಕ ದಂಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಜತ್ತಪ್ಪ ಮಾಸ್ತರ್,ಶ್ರೀಮತಿ.ಶಾರದಾ ಜತ್ತಪ್ಪ, ಡಾ| ಕೃಷ್ಣಪ್ಪ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.