ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ ಸಭಾ ಕಾರ್ಯಕ್ರಮ

0

ಪ್ರವಾದಿ ಸಂದೇಶ ಸಾರಿದ ಉಲಮಾ ಉಮರಾ ನಾಯಕರುಗಳು

ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ ಸಭಾ ಕಾರ್ಯಕ್ರಮ ಸೆ 13 ರಂದು ಗಾಂಧಿನಗರ ಮಾರ್ಹೂಂ ಸತ್ತಾರ್ ಸಂಗಮ್ ವೇದಿಕೆಯಲ್ಲಿ ನಡೆಯಿತು.

ಸಾರ್ವಜನಿಕ ಸಭಾ ಕಾರ್ಯಕ್ರಮವನ್ನು ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ನಾವೂರು ಸುಳ್ಯ ರವರು ದುವಾ ಮೂಲಕ ಉದ್ಘಾಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಯ್ಯದ್ ತ್ವಾಹಿರ್ ಸ‌ಅದಿ

ಮುಖ್ಯ ಪ್ರಭಾಷಣಗಾರರಾಗಿ ಕೇರಳದ ಪ್ರಖ್ಯಾತ ವಾಗ್ಮಿ ನವಾಝ್ ಮನ್ನಾನಿ ತಿರುವನಂತಪುರಂ ರವರು ಭಾಗವಹಿಸಿ ಮಾತನಾಡಿ ‘ಪ್ರವಾದಿಯವರ ಮೇಲಿನ ಪ್ರೀತಿಯನ್ನು ನಾವುಗಳು ಅವರ ಆದರ್ಶ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅನುಸರಿಸುವ ಮೂಲಕ ಆಗಬೇಕು.ಸತ್ಯ ಮತ್ತು ಪ್ರೀತಿ, ಕರುಣೆಯ ಸಂಕೇತವೇ ಪ್ರವಾದಿ ಸಂದೇಶ ವಾಗಿದ್ದು ಪರಸ್ಪರ ಸಹೋದರತ್ವ ಜೀವನದ ಮೂಲಕ ಅದನ್ನು ನಾವುಗಳು ನಿರ್ವಹಿಸಬೇಕು ಎಂದು ಹೇಳಿದರು.

ಸಂದೇಶ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಪ್ರಭಾಷಣಗಾರರಾದ ಖ್ಯಾತ ವಾಗ್ಮಿ ಎಸ್.ಎನ್. ಬಶೀರ್ ಮಂಜೇಶ್ವರ ಹಾಗೂ ಮೌಲಾನ ಹುಸೇನ್ ಅಹ್ಸನಿ ಮೂರ್ನಾಡ್ ಮತ್ತು ಎಸ್ ಡಿ ಪಿ ಐ ಮುಖಂಡ ರಿಯಾಝ್ ಕಡಂಬು ರವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿ ತಾಲೂಕು ಮೀಲಾದ್ ಸಂಘಟಕರ ಶಿಸ್ತುಬದ್ದ ಈ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪ್ರಮುಖರಾದ ಟಿ.ಎಂ.ಶಹೀದ್ ತೆಕ್ಕಿಲ್, ಕೆ.ಎಂ.ಮುಸ್ತಫಾ ಜನತಾ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಬ್ದುಲ್ ಕಲಾಂ, ಅಬ್ದುಲ್ ಮಜೀದ್ ಜನತಾ,ಮಿಲಾದ್ ಸಮಿತಿ ಅಧ್ಯಕ್ಷ ಜುನೈದ್ ಎನ್ ಎ, ಹಾಜಿ ಅಬೂಬಕ್ಕರ್ ಮಂಗಳ,ಎಸ್ ಸಂಶುದ್ದೀನ್ ಅರಂಬೂರು,ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಜಿ.ಕೆ.ಹಮೀದ್, ತಾಜ್ ಮಹಮ್ಮದ್ ಸಂಪಾಜೆ, ಹಮೀದ್ ಸುಣ್ಣಮೂಲೆ,ಅಬ್ದುಲ್ ಹಮೀದ್ ಬೀಜಕೊಚ್ಚಿ,ಅಬ್ದುಲ್ ರಜ್ಜಾಕ್ ಕರಾವಳಿ, ಹಾಜಿ ಬಿ ಎಂ ಅಬೂಬಕ್ಕರ್ ಹಾಗೂ ಧಾರ್ಮಿಕ, ಸಾಮಾಜಿಕ ನೇತಾರರು ಉಪಸ್ಥಿತರಿದ್ದರು.

ಸಂಚಾಲಕರಾದ ಕೆ.ಎಸ್‌.ಉಮ್ಮರ್, ಉಪಾಧ್ಯಕ್ಷರಾದ ರಶೀದ್ ಜಟ್ಟಿಪಳ್ಳ,ಕಾರ್ಯದರ್ಶಿ ಅಝೀಝ್ ಸಂಗಮ್ ಅಬ್ದುಲ್ ಖಾದರ್ ಸಂಗಂ,ಇಕ್ಬಾಲ್ ಸುಣ್ಣಮೂಲೆ,ನವಾಝ್ ಪಂಡಿತ್ ಜಯನಗರ,ನೌಶಾದ್ ಕೆರೆಮೂಲೆ, ಹಾಗೂ ಸಮಿತಿ ಯ ಸರ್ವ ಸದಸ್ಯರುಗಳು ಸಹಕರಿಸಿದರು.

ಮೀಲಾದ್ ಸಮಿತಿ ಕೋಶಾಧಿಕಾರಿ ಉನೈಸ್ ಪೆರಾಜೆ ಸ್ವಾಗತಿಸಿ ಅಧ್ಯಕ್ಷ ಜುನೈದ್ ವಂದಿಸಿದರು.