ಚೆಂಬು ಪರಿಸರದಲ್ಲಿ ಪ್ರಾಣಿ ಬೇಟೆ ವೇಳೆ ಗುಂಡುತಾಗಿ ವ್ಯಕ್ತಿಯ ಕಾಲಿಗೆ ಗಾಯ

0

ಮಡಿಕೇರಿ ಪೊಲೀಸರ ಆಗಮನ ಪರಿಶೀಲನೆ

ಚೆಂಬು ಪರಿಸರದಲ್ಲಿ ಕಾಡುಪ್ರಾಣಿ ಬೇಟೆ ಮಾಡಲು ಹೋಗಿ ವ್ಯಕ್ತಿಯೋರ್ವರ ಕಾಲಿಗೆ ಗುಂಡು ತಾಗಿ ಗಾಯಗೊಂಡಿರುವ ಬಗ್ಗೆ ತಿಳಿದು ಬಂದಿದೆ.

ಈ ವಿಷಯದ ಕುರಿತು ಮಡಿಕೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ವ್ಯಕ್ತಿ ಪುರುಷೋತ್ತಮ ಎಂದು ಹೇಳಲಾಗುತ್ತಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಾಗಿದೆ.