ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರ ಎಪ್ಪತ್ತನೇ ಹುಟ್ಟು ಹಬ್ಬ ಸಂಭ್ರಮಾಚರಣೆ

0

ಸುಳ್ಯದ ನಿರ್ಮಾತೃ ದಿ| ಕುರುಂಜಿ ವೆಂಕಟ್ರಮಣ ಗೌಡರ ಹಿರಿಯ ಪುತ್ರ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರ 70 ನೇ ಹುಟ್ಟು ಹಬ್ಬದ ಆಚರಣೆ ನೆಹರು ಮೆಮೋರಿಯಲ್ ಕಾಲೇಜು ಸಭಾಂಗಣದಲ್ಲಿ ಅ.29 ರಂದು ನಡೆಯಿತು. ಕಾರ್ಯಕ್ರಮವನ್ನು ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ಚಂದ್ರಶೇಖರ ಶೆಟ್ಟಿಯವರು ಉದ್ಘಾಟಿಸಿದರು. ಕೋಲಾರ ಎಂ.ಎಸ್.ಜಿ.ಎಂ. ಆಸ್ಪತ್ರೆಯ ಆರೋಗ್ಯ ನಿರ್ದೇಶಕ ದೊಡ್ಡಭದ್ರೇಗೌಡ, ಮೈಸೂರು ರೈಲ್ವೆ ಅಸ್ಪತ್ರೆಯ ಆರೋಗ್ಯ ಅಧಿಕಾರಿ ಡಾ.ಮಂಜುನಾಥ್ ಡಿ.ಟಿ., ಐ.ಎಂ.ಎ. ಕರ್ನಾಟಕ ಮಾಜಿ ಅಧ್ಯಕ್ಷ‌ ಕೃಷ್ಣೇ ಗೌಡ, ಕುಶಾಲನಗರ ಕಾವೇರಿ ಸ್ಕಿನ್ ಕೇರ್ ಕ್ಲಿನಿಕ್ ನ ಡಾ.ಸಿದ್ದುಪ್ರಕಾಶ್ ಮುಖ್ಯಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರಂತೋಡು ನೆಹರು ಮೆಮೊರಿಯಲ್ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಕೆ.ಆರ್ ಗಂಗಾಧರ ಅಭಿನಂದನಾ ಭಾಷಣ ಮಾಡಿದರು.


ಮೆಡಿಕಲ್ ಕಾಲೇಜ್ ಡೀನ್ ಡಾ.ನೀಲಾಂಬಿಕೆ ನಟರಾಜನ್, ಡಾ.ಶೀಲಾ ಜಿ.ನಾಯಕ್, ಶ್ರೀಮತಿ ಶೋಭಾ ಚಿದಾನಂದ, ಡಾ.ಐಶ್ವರ್ಯ ಗೌತಮ್, ಡಾ.ಗೌತಮ್, ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಎನ್.ಎಂ.ಸಿ. ಪ್ರಾಂಶುಪಾಲ ಡಾ.ಎಂ.ಎಂ.ರುದ್ರಕುಮಾರ್, ಕೆ.ವಿ.ಜಿ. ಆಯುರ್ವೇದ ಕಾಲೇಜ್ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ., ಕೆ.ವಿ.ಜಿ. ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನ ಶೈಕ್ಷಣಿಕ ಸಂಯೋಜಕಿ ಡಾ.ನವ್ಯ , ಕೆ.ವಿ.ಜಿ. ನರ್ಸಿಂಗ್ ಇನ್ಸ್ಟಿಟ್ಯೂಟ್ ಪ್ರಾಂಶುಪಾಲ ಡಾ.ಪ್ರಮೋದ್ ಕೆ.ಜೆ., ನರ್ಸಿಂಗ್ ಇನ್ಸ್ಟಿಟ್ಯೂಟ್ ನ ಶ್ರೀಮತಿ ಚಂದ್ರಾವತಿ, ಕೆ.ವಿ.ಜಿ. ಪ್ಯಾರಾ ಮೆಡಿಕಲ್ ಕೋರ್ಸ್ ಗಳ ಶೈಕ್ಷಣಿಕ ಸಂಯೋಜಕಿ ಡಾ.ನಮ್ರತಾ, ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಟೀನಾ ಎಚ್.ಎಸ್., ಕೆ.ವಿ.ಜಿ. ಫೀಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ.ಮನೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದತ್ತಿನಿಧಿ ಸ್ಥಾಪನೆ

ಕೆ.ವಿ.ಜಿ. ಸಮೂಹ ಸಂಸ್ಥೆಗಳ ಉದ್ಯೋಗಿಗಳ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಡಾ.ಕೆ.ವಿ.ಚಿದಾನಂದರು 25 ಲಕ್ಷ ರೂ.ಗಳ ದತ್ತಿನಿಧಿ ಸ್ಥಾಪಿಸಿದರು.

ಕಡಬ ಗೌಡ ಸಂಘಕ್ಕೆ ರೂ.50 ಲಕ್ಷ ದೇಣಿಗೆ

ಇದೇ ಸಂದರ್ಭ ಡಾ.ಕೆ.ವಿ.ಚಿದಾನಂದರು ಕಡಬ ಗೌಡ ಸಂಘಕ್ಕೆ ರೂ.50 ಲಕ್ಷ ದೇಣಿಗೆ ನೀಡಿದರು. ಕಡಬ ಗೌಡ ಸಂಘದ ಪದಾಧಿಕಾರಿಗಳು ಚೆಕ್ ಸ್ವೀಕರಿಸಿ ಕೃತಜ್ಞತೆ ಸಮರ್ಪಿಸಿದರು.

ಸನ್ಮಾನ

70 ತುಂಬಿ 71 ಕ್ಕೆ ಕಾಲಿರಿಸಿದ ಡಾ.ಕೆ.ವಿ.ಚಿದಾನಂದರನ್ನು ಡಾ.ಚಂದ್ರಶೇಖರ ಶೆಟ್ಟಿ ಯವರು ಸನ್ಮಾನಿಸಿದರು. ಡಾ.ಚಿದಾನಂದ ಹಾಗೂ ಪತ್ನಿ ಶ್ರೀಮತಿ ಶೋಭಾ ಚಿದಾನಂದರಿಗೆ ಆಳೆತ್ತರದ ಹಾರ ಹಾಕಿ ಪೇಟ ತೊಡಿಸಿ, ಫಲಪುಷ್ಪಗಳನ್ನಿತ್ತು ಸಂಭ್ರಮಿಸಲಾಯಿತಲ್ಲದೆ, ಚಿತ್ರಕಲಾಕೃತಿ ಹಾಗೂ ಆಳೆತ್ತರದ ಭಾವಚಿತ್ರ ನೀಡಿ ಸಂಭ್ರಮಿಸಲಾಯಿತು . ಹುಟ್ಟುಹಬ್ಬದ ಆಚರಣೆಗೆ ವಿಶೇಷವಾಗಿ ಸಿದ್ಧಗೊಳಿಸಲಾದ ತಲಾ ಹತ್ತು ಕೆ.ಜಿ.ಯ 7 ಕೇಕ್ ಗಳನ್ನು ಡಾ.ಚಿದಾನಂದ ದಂಪತಿ ಕತ್ತರಿಸಿ ಸಿಹಿ ಹಂಚಿದರು. ಸನ್ಮಾನ ಅಭಿಮಾನ ಸ್ವೀಕರಿಸಿದ ಡಾ.ಚಿದಾನಂದರು ” ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಸಂಘಟಿಸಿದ್ದು ತನಗೆ ಶಕ್ತಿ ಬಂದಿದೆ ” ಎಂದು ಹೇಳಿ ಕೃತಜ್ಞತೆ ಸಮರ್ಪಿಸಿದರು. ಡಾ.ನೀಲಾಂಬಿಕೆ ನಟರಾಜನ್ ಸ್ವಾಗತಿಸಿ, ಡಾ.ಲೀಲಾಧರ್ ಡಿ.ವಿ. ವಂದಿಸಿದರು. ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಿಥಾಲಿ ಪಿ.ರೈ ಹಾಗೂ ಕು.ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.