ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಜ್ರಾಭರಣಗಳ ವಾರ್ಷಿಕ ಹಬ್ಬ `ಗ್ಲೋ ಫೆಸ್ಟ್’ಗೆ ಚಾಲನೆ

0

ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ವಜ್ರಾಭರಣಗಳ ವಾರ್ಷಿಕ ಮಹೋತ್ಸವ `ಗ್ಲೋ ಫೆಸ್ಟ್’ಗೆ ಡಿ.15 ರಂದು ಚಾಲನೆ ದೊರೆಯಿತು.

ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ಮಾತನಾಡಿ, ವಜ್ರಾಭರಣಗಳನ್ನು ಧರಿಸುವುದು ಹಾಗೂ ಖರೀದಿಸುವುದು ಸಾಂಸ್ಕೃತಿಕವಾಗಿದೆ.ವಜ್ರ ಅಂದರೆ ಕೇವಲ ಕಲ್ಲಲ್ಲ.ಅದು ಶುದ್ದತೆ, ಶಕ್ತಿ ವರ್ಧಕ ಹಾಗೂ ಪ್ರೇಮ, ವಿಶ್ವಾಸಗಳನ್ನು ಸೂಚಿಸುತ್ತದೆ.ನಂಬಿಕೆ ಮತ್ತು ವಿಶ್ವಾಸದ ಜೊತೆಗೆ ವೈವಿಧ್ಯಮಯವಾದ ವಿನ್ಯಾಸಗಳು ಜಿ.ಎಲ್.ಆಚಾರ್ಯ ಮಳಿಗೆಯ ವೈಶಿಷ್ಟವಾಗಿದೆ ಎಂದು ಹೇಳಿ ಶುಭಹಾರೈಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಸುಧನ್ವ ಬಿ.ಆಚಾರ್ಯ ಮಾತನಾಡಿ, ವಜ್ರಗಳಲ್ಲಿ ನೈಜ ಹಾಗೂ ಲ್ಯಾಬ್‌ನಲ್ಲಿ ತಯಾರಾಗುವ ವಜ್ರಗಳು ಎಂಬ ಎರಡು ವಿಧಗಳಿದ್ದು ನಮ್ಮಲ್ಲಿ ನೈಜ ವಜ್ರಗಳು ಮಾತ್ರವೇ ಲಭ್ಯವಿದೆ.ನೈಜ ವಜ್ರಗಳ ಮೌಲ್ಯವು ಭೂಮಿ ಹುಟ್ಟಿದಷ್ಟೇ ಹಳೆಯದು.ಇವುಗಳ ಬೆಲೆ ನಿರಂತರವಾಗಿ ಏರುತ್ತಲೇ ಬಂದಿದೆ.ಆದರೆ ಲ್ಯಾಬ್‌ನಲ್ಲಿ ತಯಾರಿಸಿದ ವಜ್ರಗಳ ಬೆಲೆ ಕಳೆದ ಕೆಲ ವರ್ಷಗಳಲ್ಲಿ ಶೇ.70 ರಷ್ಟು ಕುಸಿದಿದೆ.ಮಾರುಕಟ್ಟೆಯಲ್ಲಿ ನೈಸರ್ಗಿಕ ವಜ್ರಗಳ ಅಪೂರ್ವತೆ ಮತ್ತು ದೀರ್ಘಕಾಲಿಕ ಮೌಲ್ಯವನ್ನು ಗಮನದಲ್ಲಿಡಬೇಕಾದ ಸೂಕ್ಷ್ಮ ಜಾಗೃತಿ ಅವಶ್ಯಕ ಎಂದರು. ಮಳಿಗೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಜ್ರಾಭರಣಗಳ ಉತ್ತಮ ಸಂಗ್ರಹದೊಂದಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.

ಗ್ಲೋ ಫೆಸ್ಟ್‌ನಲ್ಲೇನಿದೆ….!: ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ರೂ.7000ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ವೈವಿಧ್ಯಮಯ ವಜ್ರಾಭರಣಗಳ ವಿನೂತನ ಸಂಗ್ರಹವಿದ್ದು,ವಜ್ರಾಭರಣಗಳು ದುಬಾರಿ ಎಂದೇ ಭಾವನೆಯಲ್ಲಿರುವ ಜನರಿಗೆ ಕೈಗೆಟಕುವ ದರದಲ್ಲೂ ವಜ್ರಾಭರಣಗಳು ಲಭ್ಯವಿದೆ.ವಜ್ರಾಭರಣ ರೂ.3500 ರಿಂದ ಪ್ರಾರಂಭವಾಗುತ್ತದೆ.ಗ್ಲೋ ವಜ್ರಾಭರಣಗಳು ಅಂತರ್ರಾಷ್ಟ್ರೀಯ ಪ್ರಯೋಗಾಲಯದಿಂದ ಪ್ರಮಾಣೀಕರಿಸಲ್ಪಟ್ಟ, ಉತ್ಕೃಷ್ಟ ಶ್ರೇಣಿಯ ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ ನೆಕ್ಲೆಸ್, ಬಳೆಗಳ ವಿವಿಧ ವಿನ್ಯಾಸಗಳ ಅಮೋಘ ಸಂಗ್ರಹವಿದೆ.3600ಕ್ಕೂ ಮಿಕ್ಕಿದ ಡಿಸೈನ್ ಗಳಲ್ಲಿ ಕಣ್ಮನ ಸೆಳೆಯುವ ವಜ್ರಾಭರಣಗಳ ಅಮೋಘ ಸಂಗ್ರಹವಿದ್ದು, ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳ ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.ಜೊತೆಗೆ ನುರಿತ ತಜ್ಞರಿಂದ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ, ಪ್ರತಿಷ್ಠಿತ ಪ್ರಮಾಣೀಕೃತ ಏಜೆನ್ಸಿಗಳಿಂದ ದೃಢೀಕರಣಗೊಂಡ ವಜ್ರಾಭರಣಗಳ ಶ್ರೇಣಿ, ಪ್ರಮಾಣೀಕೃತ ಇಎಫ್ ಬಣ್ಣದ ಹಳೆಯ ವಜ್ರಾಭರಣಗಳ ವಿನಿಮಯ, ಮರು ಖರೀದಿಯ ಗ್ಯಾರಂಟಿ, ಅಚ್ಚರಿಯ ಕೊಡುಗೆ ಹಾಗೂ ಉಡುಗೊರೆಗಳನ್ನು ತಮ್ಮದಾಗಿಸುವ ಸುವರ್ಣಾವಕಾಶವಿದೆ.ಈ ಕೊಡುಗೆಗಳು ಪುತ್ತೂರು, ಸುಳ್ಯ, ಮೂಡಬಿದರೆ, ಹಾಸನ ಹಾಗೂ ಕುಶಾಲನಗರದಲ್ಲಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್ ಮಳಿಗೆಗಳಲ್ಲಿಯೂ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮಳಿಗೆಯ ಆಡಳಿತ ನಿರ್ದೇಶಕ ಲಕ್ಷ್ಮೀಕಾಂತ ಆಚಾರ್ಯ ಸ್ವಾಗತಿಸಿ, ಫ್ರೋರ್ ಮ್ಯಾನೇಜರ್ ಭಾರ್ಗವ್ ವಂದಿಸಿದರು.ಶೋರೂಂ ಮ್ಯಾನೇಜರ್ ಶೇಖರ್ ಮತ್ತು ಪುರಂದರ, ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಸಹಕರಿಸಿದರು.ಗ್ರಾಹಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಾನು ಕಳೆದ ೨೫ ವರ್ಷಗಳಿಂದ ಜಿ.ಎಲ್ ಆಚಾರ್ಯ ಮಳಿಗೆಯಿಂದಲೇ ಚಿನ್ನಾಭರಣ ಖರೀದಿಸುತ್ತೀದ್ದೆನೆ. ಇಲ್ಲಿನ ಚಿನ್ನಾಭರಣಗಳ ಗುಣಮಟ್ಟ ಬಹಳಷ್ಟು ಉತ್ತಮವಾಗಿದೆ.ನನ್ನ ತಾಯಿ ಅವರ ಮದುವೆಗೆ ಮುಂಚೆಯೇ 1960 ರಲ್ಲಿ ಈ ಮಳಿಗೆಯಿಂದಲೇ ಉಂಗುರ ಖರೀದಿಸಿದ್ದರು.ಆ ಉಂಗುರವು ಈಗಲೂ ಅವರಲ್ಲಿದ್ದು ಅದನ್ನು ಯಾರಿಗೂ ಕೊಡಲು ಬಿಡುವುದಿಲ್ಲ. ನಾವು, ನಮ್ಮ ಕುಟುಂಬದವರು, ಮೈಸೂರಿನಿಂದ ಬಂದವರು ಇಲ್ಲಿಂದಲೇ ಖರೀದಿಸುತ್ತಾರೆ.ಇಲ್ಲಿ ಚಿನ್ನಾಭರಣಗಳ ಉತ್ತಮ ಸಂಗ್ರಹಗಳಿವೆ.ಸಿಬ್ಬಂದಿಗಳು ನಗುಮೊಗದ ಸೇವೆ ನೀಡುತ್ತಿದ್ದು ನಮಗೆ ಬಹಳಷ್ಟು ಖುಷಿ ನೀಡಿದೆ.ಹೀಗಾಗಿ ಚಿನ್ನಾಭರಣ ಖರೀದಿಗೆ ಜಿ.ಎಲ್‌ಗೆ ಬರುತ್ತಿವೆ

ನಳಿನಿ ಪಿ.ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

ಕಳೆದ ಹಲವು ವರ್ಷಗಳಿಂದ ಡಿಸೆಂಬರ್ ತಿಂಗಳಲ್ಲಿ ವಜ್ರಾಭರಣಗಳ ಮಹೋತ್ಸವ ಗ್ಲೋ ಫೆಸ್ಟ್ ಆಯೋಜಿಸಲಾಗುತ್ತಿದೆ.ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ.ವಿವಿಧ ವಿನ್ಯಾಸದ ವಜ್ರದ ಆಭರಣಗಳು ಮಳಿಗೆಯಲ್ಲಿ ಲಭ್ಯವಿದೆ.ಜೊತೆಗೆ ತರಬೇತಿ ಪಡೆದ ಸಿಬ್ಬಂದಿಗಳಿಂದ ವಜ್ರಾಭರಣಗಳ ಮಾಹಿತಿ ಅಭಿಯಾನವೂ ಗ್ಲೋ
ಫೆಸ್ಟ್‌ನಲ್ಲಿದೆ.ಆ ಮೂಲಕ ಮಳಿಗೆಯಲ್ಲಿ ಪಾರದರ್ಶಕವಾಗಿ ವ್ಯವಹಾರ ನಡೆಸಲಾಗುತ್ತಿದೆ. ಫೆಸ್ಟ್ ಮೂಲಕ ಗ್ರಾಹಕರಿಗೆ ಉತ್ತಮ ದರ ಹಾಗೂ ಕೊಡುಗೆಗಳನ್ನು ನೀಡಲಾಗುತ್ತಿದೆ. ಡಿ.15ರಿಂದ ಪ್ರಾರಂಭಗೊಂಡು ಜ.15ರ ತನಕ ಗ್ಲೋ ಫೆಸ್ಟ್ ನಡೆಯಲಿದೆ
-ಬಲರಾಮ ಆಚಾರ್ಯ,
ಚೆಯರ್‌ಮೆನ್ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್‍ಸ್