ದಸರಾ ಯೋಗ ಸ್ಪರ್ದೆಯಲ್ಲಿ ಹಾರ್ದಿಕ ಕೆ.ಕೆ ತೃತೀಯ

0

 

ದಸರಾ ಪ್ರಯುಕ್ತ ಆ. 16ರಂದು ಆವಿಷ್ಕಾರ್ ಯೋಗ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಯೋಗಾಸನ ಕ್ರೀಡಾ ಸಂಸ್ಥೆ ಮಂಗಳೂರು ಇವರು ನಡೆಸಿದ ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 6 ರಿಂದ 10 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಹಾರ್ದಿಕ ಕೆ. ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.

ಈಕೆ ಪಂಜ ಕೆರಕ್ಕೋಡಿ ಕುಶಾಲಪ್ಪ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ. ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗಗುರು ಸಂತೋಷ್ ಮುಂಡಕಜೆ ತರಬೇತಿ ನೀಡುತ್ತಿದ್ದಾರೆ.