ಕುದ್ಪಾಜೆ : ಬಾವಿಗೆ ಹಾರಿ ಆತ್ಮಹತ್ಯೆ

0

 

ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುದ್ಪಾಜೆ ಎಂಬಲ್ಲಿ ಸಂಭವಿಸಿದೆ. ಸುಳ್ಯ ಕಸಬಾ ಗ್ರಾಮದ ಕಾಯರ್ತೋಡಿ ಬಳಿಯ ಕುದ್ಪಾಜೆ ಕೃಷ್ಣಪ್ಪ (ಬಚ್ಚಪ್ಪ) ಗೌಡರವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಿನ್ನೆ ರಾತ್ರಿಯೇ ಬಾವಿಗೆ ಮನೆಯ ಅಂಗಳದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಬಾವಿಯಲ್ಲಿ ಮೃತದೇಹ ಕಂಡುಬಂದಿತ್ತು.
ಇವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸರಸ್ವತಿ, ಪುತ್ರಿಯರಾದ ನಿವೇದಿತಾ, ನಿರುಪಮಾ, ತಿಲಕ, ಪೂರ್ಣಿಮಾ, ಪುತ್ರ ದೇವರಾಜ್, ಸೊಸೆ, ಅಳಿಂದಿಯಂದಿರು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.