ಸುಳ್ಯ ತಾಲೂಕು ಭಜನಾ ಪರಿಷತ್ ಸಭೆ- ಹಿರಿಯ ಭಜಕ ಸಾಧಕರಿಗೆ ಸನ್ಮಾನ

0

ಸುಳ್ಯ ತಾಲೂಕು ಭಜನಾ ಪರಿಷತ್ ನ ಮಾಸಿಕ ಸಭೆಯು ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ರವರ ಅಧ್ಯಕ್ಷತೆಯಲ್ಲಿ ನ.14 ರಂದು ಸುಳ್ಯ ಯೋಜನಾ ಕಚೇರಿಯ ಸಭಾಭವನದಲ್ಲಿ ನಡೆಯಿತು.
ವೇದಿಕೆಯಲ್ಲಿ ಯೋಜನಾಧಿಕಾರಿ ನಾಗೇಶ್ ಪಿ, ಗೌರವಾಧ್ಯಕ್ಷ ರಾದ ವಿಶ್ವನಾಥ ರೈ ಅರ್ಗುಡಿ, ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಸತೀಶ್ ಕಲ್ಮಕ್ಕಾರು ಉಪಸ್ಥಿತರಿದ್ದರು. ಈ ಸಂದರ್ಭ ಧರ್ಮಸ್ಥಳದಲ್ಲಿ ನಡೆದ ಭಜನಾ ಕಮ್ಮಟ ದಲ್ಲಿ ಹಿರಿಯ ಸಾಧಕ ಪ್ರಶಸ್ತಿ ಪಡೆದ ವಿಶ್ವನಾಥ ರೈ ಅರ್ಗುಡಿ ಯವರನ್ನು ಸನ್ಮಾನಿಸಲಾಯಿತು.
ಪರಿಷತ್ ನಿರ್ದೇಶಕ ಚಂದ್ರಕಾಂತ ಬಳ್ಪ, ದಯಾನಂದ ಕೊರತ್ತೋಡಿ ಮತ್ತು ವಲಯ ಮೇಲ್ವಿಚಾರಕರಾದ ಸುಧೀರ್, ರಾಜೇಶ್, ಸೀತಾರಾಮ, ಬಾಲಕೃಷ್ಣ, ಹೇಮಲತಾ, ವಸಂತ ,ತೀರ್ಥರಾಮ, ಪ್ರಿಯಾ,ವಿಶಾಲ, ಉಷಾ ಕಲ್ಯಾಣಿ ಯವರು ಉಪಸ್ಥಿತರಿದ್ದರು. ಸತೀಶ್ ಕಲ್ಮಕ್ಕಾರು ಕಾರ್ಯಕ್ರಮ ನಿರೂಪಿಸಿದರು.