ಬೆಳ್ಳಾರೆ: ಶ್ರೀ ಸದಾಶಿವ ವೇದಪಾಠ ಶಾಲೆಯಲ್ಲಿ
ಶ್ರೀ ರುದ್ರ, ಚಮಕ,ಸೂಕ್ತ ಪಠಣಾಭ್ಯಾಸ ಪ್ರಾರಂಭ

0

ಶ್ರೀ ಸದಾಶಿವ ವೇದ ಪಾಠಶಾಲಾ ಬೆಳ್ಳಾರೆ ಇವರ ಆಶ್ರಯದಲ್ಲಿ ಬೆಳ್ಳಾರೆ ವಲಯದ ಹವ್ಯಕ ಬಂಧುಗಳಿಂದ ವೇದ ಪಾರಾಯಣ ಪಠಣ ಕಾರ್ಯಕ್ರಮವು ಹಿರಿಯರಾದ ‘ಮಿತ್ರಾ’ ಟಿ. ಮಹಾಲಿಂಗ ಭಟ್ ರವರು ದೀಪ ಪ್ರಜ್ವಲಿಸುವ ಮೂಲಕ ನ. 21ರಂದು ವಿದ್ಯುಕ್ತವಾಗಿ ಚಾಲನೆಗೊಂಡಿತು. ಶ್ರೀ ಸದಾಶಿವ ವೇದಪಾಠ ಶಾಲಾ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿ, ಮುಂಬರುವ ದಿನಗಳಲ್ಲಿ ಬೆಳ್ಳಾರೆ ಹಾಗೂ ಸುತ್ತಲಿನ ಹವ್ಯಕ ಬಂಧುಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ವೇದ ಪರಂಪರೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಕರೆ ಇತ್ತರು.