ಸರಕಾರಿ ಪ್ರೌಢಶಾಲಾ ಸಂಘದಿಂದ ನಿವೃತ್ತ ಶಿಕ್ಷಕ ಅಚ್ಚುತ‌ ಮಾಸ್ತರ್ ರಿಗೆ ಸನ್ಮಾನ

0

ಮರ್ಕಂಜ ಸರಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಚ್ಚುತ ಮಾಸ್ತರ್ ರಿಗೆ ಸನ್ಮಾನ ಕಾರ್ಯಕ್ರಮ ಜ.2 ರಂದು ಗಾಂಧಿನಗರ ಕೆ.ಪಿ.ಎಸ್.‌ನಲ್ಲಿ ನಡೆಯಿತು. ಪ್ರೌಢಶಾಲಾ ಸಂಘದ ಅಧ್ಯಕ್ಷ ಚಂದ್ರಶೇಖರ, ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಸನ್ಮಾನ ನೆರವೇರಿಸಿದರು.
ಸಂಘದ ಕಾರ್ಯದರ್ಶಿ ಚಿನ್ನಪ್ಪ ಗೌಡ ಪತ್ತುಕುಂಜ, ಕೋಶಾಧಿಕಾರಿ ಪ್ರವೀಣ ಮರ್ಕಂಜ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪ್ರಕಾಶ್ ಮೂಡಿತ್ತಾಯ, ಗಾಂಧಿನಗರ ಕೆಪಿಎಸ್ ಪ್ರಾಂಶುಪಾಲ ಸಮದ್, ಉಪಪ್ರಾಂಶುಪಾಲ ಅರುಣ್ ಕುಮಾರ್ ಉಪಸ್ಥಿತರಿದ್ದರು.

ರಾಜೇಶ್ ಕೊಲ್ಲಮೊಗ್ರ ಪ್ರಾರ್ಥಿಸಿದರು. ನಾರಾಯಣ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು.