ಜ. 26ರಿಂದ ಅಯ್ಯನಕಟ್ಟೆ ಜಾತ್ರೋತ್ಸವ ನಡೆಯಲಿದ್ದು, ಈ ಬಗ್ಗೆ ಪ್ರತೀ ದಿನ ವಿವಿಧ ಸಂಘ ಸಂಸ್ಥೆಗಳಿಂದ, ಭಕ್ತಾದಿಗಳಿಂದ, ಊರವರಿಂದ ಶ್ರಮದಾನ ನಡೆಯುತ್ತಿದೆ.
ಶ್ರೀಕೃಷ್ಣ ಸೇವಾ ಸಮಿತಿ, ನಾಗರಿಕ ಸೇವಾ ಸಮಿತಿ ಬಾಳಿಲ- ಮುಪ್ಪೇರ್ಯ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ, ಪೊಸೋಡು, ಬಾಳಿಲ ಕುಟುಂಬಸ್ಥರು, ಜಾತ್ರೋತ್ಸವದ ವಿವಿಧ ಸಮಿತಿಗಳ ಸದಸ್ಯರು, ಕಜೆಮೂಲೆ, ತಂಟೆಪ್ಪಾಡಿ ಭಾಗದ ಭಕ್ತಾದಿಗಳು ಸೇರಿದಂತೆ ಕಳಂಜ, ಬಾಳಿಲ, ಮುಪ್ಪೇರ್ಯ ಗ್ರಾಮಗಳ ಗ್ರಾಮಸ್ಥರು ದಿನನಿತ್ಯ ಶ್ರಮಸೇವೆ ನಡೆಸುತ್ತಿದ್ದಾರೆ.