ಸಂಪಾಜೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಅರಣ್ಯ ಉಪವಲಯಾರಣ್ಯಾಧಿಕಾರಿ ಹಾಗೂ ಗಸ್ತು ಅರಣ್ಯ ಪಾಲಕರ ವಸತಿ ಗೃಹ ಉದ್ಘಾಟನಾ ಸಮಾರಂಭ ಫೆ.6 ರಂದು ನಡೆಯಿತು.
ಸಚಿವ ಎಸ್. ಅಂಗಾರ ನೂತನ ವಸತಿ ಗೃಹ ಉದ್ಘಾಟಿಸಿ ಶುಭ ಹಾರೈಸಿದರು. ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಹರಿಣಿ ದೇರಾಜೆ, ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಡಿಎಫ್ ಒ ಡಾ. ದಿನೇಶ್ ಕುಮಾರ್ ವೈ.ಕೆ., ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪುತ್ತೂರು ಎಸಿಎಫ್ ವಿ.ಪಿ. ಕಾರ್ಯಪ್ಪ, ಕೆಎಫ್ ಡಿಸಿ ಡಿಎಂ ಚಿಕ್ಕಮುತ್ತಯ್ಯ, ಸುಳ್ಯ ರೇಂಜರ್ ಗಿರೀಶ್ ಆರ್, ಪಂಜ ರೇಂಜರ್ ಮಂಜುನಾಥ್, ಸುಬ್ರಹ್ಮಣ್ಯ ರೇಂಜರ್ ರಾಘವೇಂದ್ರ, ಪುತ್ತೂರು ರೇಂಜರ್ ಕಿರಣ್, ಬಂಟ್ವಾಳ ರೇಂಜರ್ ರಾಜೇಶ್ ಇದ್ದರು.