ಶ್ರೀರಾಮ್ ಪೇಟೆ ಸ್ಕೂಟಿ ಕಳವು ಪ್ರಕರಣಕ್ಕೆ ಟ್ವಿಸ್ಟ್ , ಗಡಿಬಿಡಿಯಿಂದ ಸ್ಕೂಟಿಯನ್ನು ಕೊಂಡೊಯ್ದ ಯುವಕರು

0

ಶ್ರೀರಾಮ್ ಪೇಟೆ ಕೆಲವು ಗಂಟೆಗಳ ಮುಂದೆ ಅಂಗಡಿ ಮುಂಭಾಗ ನಿಲ್ಲಿಸಿದ್ದ ಸ್ಕೂಟಿ ವಾಹನವನ್ನು ನಾಲ್ಕು ಮಂದಿ ಯುವಕರು ಕೊಂಡೊಯ್ದ ಘಟನೆಗೆ ಸ್ವಾರಶ್ಯಕರ ತಿರುವು ಕಂಡಿದೆ.

ಸುಳ್ಯದ ಕಾಲೇಜುವೊಂದರ ವಿದ್ಯಾರ್ಥಿ ಕಾರ್ತಿಕ್ ಎಂಬುವರು ತಮ್ಮ ಸ್ಕೂಟಿ ವಾಹನ ಆಕ್ಟಿವಾ 6g ಯಲ್ಲಿ ಶ್ರೀರಾಮ್ ಪೇಟೆ ಬಳಿ ಕರ್ನಾಟಕ ಬ್ಯಾಂಕಿಗೆ ತಮ್ಮ ಸ್ನೇಹಿತರೊಂದಿಗೆ ಬಂದಿದ್ದಾರೆ.
ಬ್ಯಾಂಕಿನ ಕೆಲಸ ಮುಗಿದ ಬಳಿಕ ತರಗತಿಗೆ ತಡವಾಗಿದೆ ಎಂದು ಗಡಿಬಿಡಿಗೊಂಡ ಯುವಕರು ಅಲ್ಲೇ ನಿಂತಿದ್ದ ಫ್ರೂಟ್ ಅಂಡ್ ಜ್ಯೂಸ್ ಅಂಗಡಿ ಮಾಲಕ ರಫೀಕ್ ಎಂಬುವರ ಅದೇ ಕಂಪನಿಯ ಅದೇ ಬಣ್ಣದ ವಾಹನವನ್ನು ತಮ್ಮ ಬಳಿ ಇರುವ ಕೀಯನ್ನು ತಿರುಗಿಸಿ ಸ್ಟಾರ್ಟ್ ಮಾಡಲು ಮುಂದಾಗಿದ್ದಾರೆ. ಸ್ಟಾರ್ಟ್ ಆಗದೇ ಇದ್ದಾಗ ನಾಲ್ವರು ವಿದ್ಯಾರ್ಥಿಗಳು ಸೇರಿ ಅದನ್ನು ಪಕ್ಕದ ಗ್ಯಾರೇಜ್ ಒಂದಕ್ಕೆ ತಳ್ಳಿಕೊಂಡು ಹೋಗಿರುತ್ತಾರೆ.


ಈ ವೇಳೆ ರಫೀಕ್ ರವರು ಶೋರೂಮಿಗೆ ಫೋನ್ ಮಾಡಿ ಅವರ ಅಂಗಡಿ ಬಳಿಯಲ್ಲಿ ನಿಂತಿದ್ದ ಕಾಣೆಯಾದ ಮಾದರಿಯ ವಾಹನದ ಸಂಖ್ಯೆಯನ್ನು ನೀಡಿ ಅದರ ಮಾಲಕರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ಫೋನ್ ಮಾಡುವ ಪ್ರಯತ್ನದಲ್ಲಿ ಇರುವಾಗ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದ ಕಾರ್ತಿಕ್ ಬಂದಿದ್ದಾರೆ.

ಅಲ್ಲಿ ಮೆಕಾನಿಕ್ ಗಾಡಿ ಸ್ಟಾರ್ಟ್ ಆಗದ ಕುರಿತು ಪರಿಶೀಲನೆ ನಡೆಸಲು ಶೀಟ್ ಓಪನ್ ಮಾಡಿದಾಗ ಬಾಕ್ಸಿನಲ್ಲಿದ್ದ ಆರ್ ಸಿ ಬೇರೆಯವರದು ಎಂದು ತಿಳಿದಾಗ ಕೊಂಡೋದ ವಾಹನ ಬೇರೆಯವರದು ಎಂಬ ಬಗ್ಗೆ ಗೊತ್ತಾಗಿದೆ.

ಬಳಿಕ ರಫೀಕ್ ರವರು ಅಲ್ಲಿಗೆ ತೆರಳಿ ತಮ್ಮ ವಾಹನವನ್ನು ತೆಗೆದುಕೊಂಡು ಬಂದಿರುತ್ತಾರೆ.