ಆಲೆಟ್ಟಿ ಪ್ರಾ.ಕೃ.ಪ.ಸಹಕಾರಿ ಸಂಘದ ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಾಗಾರ

0

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ವರ್ಗದವರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಮಾ.11 ರಂದು ಸಂಘದ ವಜ್ರ ಮಹೋತ್ಸವ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.


ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಸಹಕಾರಿ ಕೇಂದ್ರದ ನಿವೃತ್ತ ಡಿ.ಎಂ. ವಿಶ್ವನಾಥ ನಾಯರ್ ರವರು ಸಿಬ್ಬಂದಿಯವರಿಗೆ ತರಬೇತಿ ನೀಡಿದರು.


ಸಹಕಾರಿ ಸಂಘದಲ್ಲಿ ಸರ್ವಿಸ್ ಮಾಡುವ ಸಿಬ್ಬಂದಿಯವರು ಕರ್ತವ್ಯ ದ ವೇಳೆಯಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಕುರಿತು ಮಾರ್ಗದರ್ಶನ ನೀಡಿದರು. ತನ್ನ ಸೇವೆಯ ಅನುಭವ ಹಾಗೂ ಸಹಕಾರಿ ಸಂಘದಲ್ಲಿ ದುಡಿಯುವ ಪ್ರತಿಯೊಬ್ಬ ಸಿಬ್ಬಂದಿ ಸಹಕಾರ ತತ್ವವನ್ನು ಅಳವಡಿಸಿಕೊಂಡು ಸಂಘದ ಸದಸ್ಯರೊಂದಿಗೆ ಅವಿನಭಾವ ಸಂಬಂಧವಿರಿಸಿಕೊಂಡು ನಗು ಮುಖದ ಸರ್ವಿಸ್ ನೀಡಬೇಕು. ಕಚೇರಿಯಲ್ಲಿ ನೆಮ್ಮದಿಯ ವಾತಾವರಣ ಮತ್ತು ಇಗೋ ಎಂಬುದನ್ನು ತ್ಯಜಿಸಿ ಸ್ನೇಹಪರ ಹೊಂದಾಣಿಕೆಯ ಭಾವನೆ ಇರುವಂತಾಗಬೇಕು. ಇದರಿಂದ ವೈಯುಕ್ತಿಕ ಹಾಗೂ ಸಹಕಾರಿ ಸಂಘದ ಬೆಳವಣಿಗೆಯಾಗಲು ಸಾಧ್ಯವಿದೆ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ನಿರ್ದೇಶಕಿ ಶ್ರೀಮತಿ ವೇದಾವತಿ ಸಣ್ಣಯ್ಯ ಆಲೆಟ್ಟಿ, ‌ಸಿ.ಇ.ಒ ದಿನಕರ ಆಲೆಟ್ಟಿ ಉಪಸ್ಥಿತರಿದ್ದರು. ಸಂಘದ ಕೇಂದ್ರ ಕಚೇರಿಯ ಸಿಬ್ಬಂದಿ ಮತ್ತು ಕೋಲ್ಚಾರು, ಅರಂಬೂರು ಶಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಾಗಾರದಲ್ಲಿ ಭಾಗವಹಿಸಿದರು.