ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ, *ವೈಭವದ ಹಸಿರುವಾಣಿ ಮೆರವಣಿಗೆ

0

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಮಾ.19 ಮತ್ತು 20ರಂದು ನಡೆಯಲಿದ್ದು ಇಂದು ಸಂಜೆ ಹಸಿರುವಾಣಿ ಮೆರವಣಿಗೆ ವೈಭವಯುತವಾಗಿ ನಡೆಯಿತು.

ದೈವಸ್ಥಾನದ ಆಡಳಿತ ಮೊಕ್ತೇಸರರ ಮನೆಯ ಬಳಿಯಿಂದ ದೈವಗಳ ಆಭರಣ ಮತ್ತು ಹಸಿರುವಾಣಿ ಮೆರವಣಿಗೆ ದೈವಸ್ಥಾನಕ್ಕೆ ಆಗಮಿಸಿತು. ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ ಕೇಸರಿ ಧ್ವಜ ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಆಡಳಿತ ಸಮಿತಿ ಅಧ್ಯಕ್ಷ ಸುಂದರ ರಾವ್, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕಜೆ ಕುಶಾಲಪ್ಪ ಗೌಡ, ನಗರ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ರೈ ದುಗ್ಗಲಡ್ಕ ಮತ್ತು ಶ್ರೀಮತಿ ಶಶಿಕಲಾ ಎ.ನೀರಬಿದಿರೆ, ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ, ಪದಾಧಿಕಾರಿಗಳಾದ ಯತೀಶ್ ರೈ ದುಗ್ಗಲಡ್ಕ, ದಿನೇಶ್ ಡಿ.ಕೆ. ಗಿರಿಧರ ಗೌಡ ನೆಕ್ರಾಜೆ, ಹೇಮಂತ್ ಕಂದಡ್ಕ ಮೊದಲಾದವರು,ಮಹಿಳಾ ಮತ್ತು ಯುವ ವೇದಿಕೆಯ ಸದಸ್ಯರು, ಊರವರು ಭಾಗವಹಿಸಿದ್ದರು.

ವಿಶೇಷ ಆಕರ್ಷಣೆಯಾಗಿ ಶ್ರೀ ಧರ್ಮಶಾಸ್ತ್ರ ಭಜನಾ ಮಂದಿರ ಬಳ್ಪ ಇವರಿಂದ ಕುಣಿತ ಭಜನೆ ಹಾಗೂ ನಾಸಿಕ್ ಬ್ಯಾಂಡ್ ಮೆರವಣಿಗೆಗೆ ಮೆರುಗು ನೀಡಿತು.ಹತ್ತಾರು ವಾಹನಗಳಲ್ಲಿ ಹಸಿರುವಾಣಿ ಆಗಮಿಸಿ,ಉಗ್ರಾಣ ತುಂಬಿಸಲಾಯಿತು.