ಐವರ್ನಾಡು ಗ್ರಾಮದ ಚಾತುಬಾಯಿ ಕುಟುಂಬದ ಧರ್ಮದೈವ ರುದ್ರಚಾಮುಂಡಿ, ಪಿಲಿಭೂತ, ಶಿರಾಡಿ ಹಾಗೂ ಉಪದೈವಗಳ ನೇಮನಡಾವಳಿ ಮಾ.26 ಮತ್ತು ಮಾ.27 ರಂದು ನಡೆಯಿತು.
ಮಾ.26 ರಂದು ಗಣಪತಿ ಹೋಮ,ನಾಗತಂಬಿಲ, ಮುಡಿಪು ಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು.
ಸಂಜೆ ಭಂಡಾರ ತೆಗೆಯಲಾಯಿತು.
ರಾತ್ರಿ ದೈವಗಳ ಕೋಲ ನಡಾವಳಿ ನಡೆಯಿತು.ಮಾ.27 ರಂದು ಧರ್ಮದೈವ ಹಾಗೂ ಶಿರಾಡಿ ದೈವಗಳ ನೇಮನಡಾವಳಿ ನಡೆಯಿತು.
ನಂತರ ಮಾರಿಕಳ ನಡೆದ ಬಳಿಕ ಪ್ರಸಾದ ವಿತರಣೆ ,ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ತರವಾಡು ಮನೆಯ ನವೀನ ಚಾತುಬಾಯಿ ಮತ್ತು ಕುಟುಂಬಸ್ಥರು, ಆನಂದ ಗೌಡ ಚಾತುಬಾಯಿ,ಮಾಯಿಲಪ್ಪ ಗೌಡ ಚಾತುಬಾಯಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.