ನಾಳೆ (ಮೇ.11) ಮರ್ಕಂಜದ ಬಲ್ನಾಡುಪೇಟೆ ಶ್ರೀ ಆದೀಶ್ವರ ಸ್ವಾಮಿ ಬಸದಿಯ 10ನೇ ವಾರ್ಷಿಕೋತ್ಸವ

0

ಮರ್ಕಂಜ ಗ್ರಾಮದ ಬಲ್ನಾಡು ಪೇಟೆ ಭಗವಾನ್ 1008 ಶ್ರೀ ಆದೀಶ್ವರ ಸ್ವಾಮಿ ಬಸದಿಯ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಧಾಮ ಸಂಪ್ರೋಕ್ಷಣೆ ಹಾಗೂ ಪ್ರತಿಷ್ಠಾ ಮಹೋತ್ಸವ (ಮೇ.11ರಂದು) ನಾಳೆ ಕಾರ್ಕಳ ಜೈನಮಠದ ರಾಜಗುರು ಭಟ್ಟಾರಕ ಲಲಿತ ಕೀರ್ತಿ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಉಪಸ್ಥಿತಿ ಯಲ್ಲಿ ನಡೆಯಲಿದೆ.

ಮೇ.11ರಂದು ಬೆಳಿಗ್ಗೆ ತೋರಣ ಮುಹೂರ್ತ, ಬಳಿಕ ವಿಮಾನ ಶುದ್ಧಿ, ಪಂಚಾಮೃತ ಅಭಿಷೇಕ, ಶ್ರೀ ಆದಿನಾಥ ಸ್ವಾಮಿಗೆ 108 ಕಲಶ ಅಭಿಷೇಕ, ಮೇಗಿನನೆಲೆ ಪಾಶ್ವ೯ನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಶ್ರೀ ಆದೀಶ್ವರ ಸ್ವಾಮಿ ಉತ್ಸವ, ಮಹಾಪೂಜೆ, ಶ್ರೀ ಪದ್ಮಾವತಿ ಅಮ್ಮನವರಿಗೆ ಅಲಂಕಾರ ಪೂಜೆ, ಪ್ರಸಾದ ವಿತರಣೆ, ಸಂಘ-ಸಂತರ್ಪಣೆ ನಡೆಯಲಿದೆ.

ಅದೇ ದಿನ ಸಂಜೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಧಾರ್ಮಿಕ ಚಿಂತಕ ಮುನಿರಾಜ ರೆಂಜಾಳ ಇವರಿಂದ ಧಾರ್ಮಿಕ ಚಿಂತನ ಗೋಷ್ಠಿ ನಡೆಯಲಿದೆ.