ಲೋಕೋಪಯೋಗಿ ಇಲಾಖೆಯ ವಿಶೇಷ ಉಪವಿಭಾಗ ಸಿಬ್ಬಂದಿ ಆದಂ ಸಾಹೇಬ್ ರಿಗೆ ಬೀಳ್ಕೊಡುಗೆ

0

ಲೋಕೋಪಯೋಗಿ ಇಲಾಖೆ ವಿಶೇಷ ಉಪವಿಭಾಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾರ್ಯ ನಿರ್ವಹಿಸುತಿದ್ದ ಆದಂ ಸಾಹೇಬ್ ರವರ ನಿವೃತ್ತಿ ಜೂ.30 ರಂದು ಹೊಂದಿದ್ದು , ಅಂದು ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು (ಪ್ರಭಾರ) ಪ್ರಮೋದ್ ಕುಮಾರ್ ಕೆ.ಕೆ. ವಹಿಸಿದ್ದರು, ಮೇನೇಜರ್ ಸುಬ್ರಹ್ಮಣ್ಯ ಕೆ. ಸ್ವಾಗತ ಕೋರಿದರು, ನೇತ್ರಾವತಿ ಸುಬ್ರಹ್ಮಣ್ಯ, ಇಲಾಖೆಯ ಸಿಬ್ಬಂದಿಗಳಾದ ತಾರಾನಾಥ್ ಕೆ.ಆರ್, ನಿತೀಶ್ ಕೆ., ಶಿವಪ್ರಕಾಶ್ ಕೆ.ಜೆ, ಭವ್ಯತಿಲಕ್, ಅಶ್ಮಿತಾ ಯನ್.ಯಮ್ ಮತ್ತು ಶ್ರೀ ದೇವಳದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಆದಂ ಸಾಹೇಬ್ ಅವರು ಕಡಬ ತಾಲೂಕಿನ ಪಾಲ್ತಾಡಿಯ ಅಂಕತಡ್ಕವರು. 1983 ರಲ್ಲಿ ರಸ್ತೆ ಕಾರ್ಮಿಕನಾಗಿ (ಗ್ಯಾಂಗ್ ಮೆನ್ )ಪುತ್ತೂರು ಪಿ.ಡಬ್ಲ್ಯೂ. ಡಿ ಯಲ್ಲಿ ಕೆಲಸಕ್ಕೆ ಸೇರಿದ್ದು, 1996 ಕೆಲಸ ಖಾಯಂ ಆಗಿತ್ತು. ಬಳಿಕ ಬಂಟ್ವಾಳದ ಪಿ.ಡಬ್ಲ್ಯೂ. ಡಿ ಯಲ್ಲಿ ಪಿಯೋನ್ ಆಗಿ ಕೆಲಸ ಮುಂದುವರೆದಿದ್ದು 2000 ನೇ ಇಸವಿಯಿಂದ 2016 ರ ವರಗೆ ಸುಳ್ಯ ಪಿ.ಡಬ್ಲ್ಯೂ. ಡಿ ಯಲ್ಲಿ ಪ್ರಭಾರವಾಗಿ ಕೆಲಸ ನಿರ್ವಹಿಸಿದ್ದರು. ಮತ್ತೆ ಮೂರು ತಿಂಗಳ ಕಾಲ ಬಂಟ್ವಾಳದಲ್ಲಿ ಕೆಲಸ ಮಾಡಿ 2016 ರಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಲೋಕೋಪಯೋಗಿ ಇಲಾಖೆ ವಿಶೇಷ ಉಪವಿಭಾಗದಲ್ಲಿ ಕೆಲಸ ನಿರ್ವಹಿಸುತಿದ್ದರು.