ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯಕ್ಕೆ ನಾಗನಬಿಂಬ ಆಗಮನ

0

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಆ.೨೦ರಂದು ನಾಗಪ್ರತಿಷ್ಠೆ ನಡೆಯಲಿದ್ದು, ಅದರ ಪ್ರಯುಕ್ತ ಇಂದು ಬೆಳಿಗ್ಗೆ ನಾಗದೇವರ ನೂತನ ಬಿಂಬವು ದೇವಾಲಯಕ್ಕೆ ತರುವ ಕಾರ್ಯಕ್ರಮವು ನಡೆಯಿತು. ಬೆಳಿಗ್ಗೆ ಪುತ್ತೂರಿನ ಮುಂಡೂರುನಿಂದ ಶಿಲ್ಪಿ ಪ್ರಶಾಂತ ಆಚಾರ್ಯರವರು ಬಿಂಬವನ್ನು ತಯಾರಿಸಿ ವೈದಿಕ ಕಾರ್ಯಕ್ರಮದೊಂದಿಗೆ ದೇವಾಲಯದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ನಂತರ ದೇವಾಲಯಕ್ಕೆ ತಂದು ದೇವಾಲಯದ ಅರ್ಚಕ ನೀಲಕಂಠರವರು ಶುದ್ಧೀಕರಣಗೊಳಿಸಿ ಜಲಸ್ತಂಭನ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಬ್ರಹ್ಮಕಲಶ ಸಮಿತಿಯ ಸದಸ್ಯರು ಹಾಗೂ ಊರ ಭಕ್ತಾಭಿಮಾನಿಗಳು ಭಾಗವಹಿಸಿದರು.