ಸೋಣಂಗೇರಿ ಸರ್ಕಲ್ ಬಳಿಯ ಅಪಾಯಕಾರಿ ಮರ ತೆರವು

0


ಸೋಣಂಗೇರಿಯಲ್ಲಿ ನೂತನವಾಗಿ ಸರ್ಕಲ್ ಮತ್ತು ರಸ್ತೆ ನಿರ್ಮಾಣದ ವೇಳೆ ರಸ್ತೆ ಬದಿಯ ಬರೆ ತೆಗೆಯಲಾಗಿದ್ದು, ತೀವ್ರ ಮಳೆಗೆ ನಿನ್ನೆ ಬರೆ ಜರಿದು ಮೇಲಿದ್ದ ಮರಗಳು ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು.
ರಸ್ತೆ ನಿರ್ಮಾಣದ ವೇಳೆ ಮರದ ಬುಡದವೆರೆಗೆ ಬರೆಯನ್ನು ಜೆಸಿಬಿ ಮೂಲಕ ತೆಗೆಯಲಾಗಿತ್ತು. ಮಳೆಗೆ ಬರೆ ಜರಿದಿರುವುದರಿಂದ 3-4 ಮರಗಳು ರಸ್ತೆಗೆ ಬೀಳುವ ಸ್ಥಿತಿಯಲ್ಲಿತ್ತು.


ಈ ಬಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ಅಪಾಯದ ಕುರಿತು ವರದಿ ಪ್ರಕಟವಾಗಿತ್ತು. ಇಂದು ಬರೆಯ ಮೇಲಿದ್ದ ಮರವನ್ನು ಮತ್ತು ಜರಿದು ಬಿದ್ದ ಮರವನ್ನು ತೆರವುಗೊಳಿಸಿದ್ದಾರೆ.