ನಿವೃತ್ತ ಎಎಸ್‌ಐ ಚಂದ್ರಶೇಖರ ನಾಯರ್‌ಕೆರೆ ನಿಧನ

0

ಮೂಲತಃ ಪಂಜದ ನಾಯರ್‌ಕೆರೆಯವರಾಗಿರುವ ನಿವೃತ್ ಎಎಸ್‌ಐ ಚಂದ್ರಶೇಖರರವರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ (ಜು.11) ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.


ಪೊಲೀಸ್ ಇಲಾಖೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಪಾಂಡೇಶ್ವರ, ಮುಲ್ಕಿ, ಬರ್ಕೆ, ಮೊದಲಾದ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಬಂದರು ಠಾಣೆಯ ಎಎಸ್‌ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸಹಾಯಕ ತನಿಖಾಧಿಕಾರಿಯಾಗಿ ಉತ್ತಮ ಹೆಸರು ಗಳಿಸಿದ್ದರು.


ಎರಡು ದಿನಗಳ ಹಿಂದಷ್ಟೆ ಸುಳ್ಯದಲ್ಲಿರುವ ಸಹೋದರ ಸಿ.ಟಿ.ರವಿಪ್ರಕಾಶ್ ಅವರ ಮನೆಗೆ ಬಂದಿದ್ದ ಚಂದ್ರಶೇಖರರವರು ಬಳಿಕ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಮೃತದೇಹವನ್ನು ಕೆವಿಜಿ ಆಸ್ಪತ್ರೆಯಿಂದ ರವಿಪ್ರಕಾಶ್‌ರವರ ಮನೆಗೆ ತರಲಾಗಿದ್ದು, ಕೊಡಿಯಾಲಬೈಲಿನ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.


ಮೃತರು ಪತ್ನಿ ಜಯಕುಮಾರಿ, ಪುತ್ರರಾದ ಅನಿಕ್ಷಿತ್, ಅಂಜನ್, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.