ಪೆರುವಾಜೆ ಗ್ರಾ.ಪಂ. ಸದಸ್ಯನ ವಿರುದ್ಧ ಸುಳ್ಳು ದೂರು : ದ.ಸಂ.ಸ ಹಮ್ಮಿಕೊಂಡಿದ್ದ ಪ್ರತಿಭಟನೆ ವಾಪಸ್

0

ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ವಿರುದ್ಧ ಗ್ರಾಮದ ಕೆಲವರು ನೀಡಿರುವ ದೂರು ಸತ್ಯಕ್ಕೆ ದೂರವಾಗಿದ್ದು, ಕೇಸು ಹಿಂಪಡೆಯುವಂತೆ ಆಗ್ರಹಿಸಿ ದ.ಸಂ.ಸ. ಮುಖ್ಯಸ್ಥ ಆನಂದ ಬೆಳ್ಳಾರೆ ನೇತೃತ್ವದಲ್ಲಿ ನಡೆಸಲುದ್ದೇಶಿಸಿದ ಪ್ರತಿಭಟನೆ ವಾಪಸ್ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆನಂದ ಬೆಳ್ಳಾರೆ ಯವರು “ಸಚಿನ್ ರ ವಿರುದ್ಧ ನೀಡಿರುವ ಕೇಸು ಸುಳ್ಳು ಕೇಸು. ಅದಕ್ಕೆ ಪ್ರತಿಯಾಗಿ ಪಂಚಾಯತ್ ನವರು ನೀಡಿರುವ ದೂರನ್ನು ಪೋಲೀಸರು ಸ್ವೀಕಾರ ಮಾಡಿರಲಿಲ್ಲ. ಆದ್ದರಿಂದ ನಾವು ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಪ್ರತಿಭಟನೆ ನಿರ್ಧರಿಸಿದ್ದೆವು. ಇದೀಗ ಪಂಚಾಯತ್ ನವರು ನೀಡುವ ಕೇಸು ಪೋಲೀಸರು ಪಡೆಯುವುದಾಗಿ ಹೇಳಿದ್ದರಿಂದ ನಾವು ಪ್ರತಿಭಟನೆ ಹಿಂಪಡೆದಿದ್ದೇವೆ ಎಂದು ಅವರು ಸುದ್ದಿಗೆ ತಿಳಿಸಿದ್ದಾರೆ.