ಅರಂತೋಡು ದ್ಸಿಕ್ರ್ ಸ್ವಲಾತ್ ಸಮಿತಿ ಗೌರವಾದ್ಯಕ್ಷರಾಗಿ ಎನ್.ಪಿ.ಎಂ.ಝೈನುಲ್ ಅಬಿದೀನ್ ತಂಙಳ್ ದುಗಲಡ್ಕ ಆಯ್ಕೆ

0

ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಕಾರ್ಯಾಚರಿಸುತ್ತಿರುವ ದ್ಸಿಕ್ರ್ ಸ್ವಲಾತ್ ಸಮಿತಿಯ ಮಹಾಸಭೆಯು ಅರಮತೊಡು ಮದರಸ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಬಹು ಅಲ್‌ಹಾಜ್ ಇಸ್ಹಾಖ್ ಬಾಖವಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಕೆ.ಯು.ಸಂಶುದ್ದೀನ್ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.


ಸಬೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಎನ್.ಪಿ.ಎಂ.ಝೈನುಲ್ ಅಬಿದೀನ್ ತಂಙಳ್, ಅಧ್ಯಕ್ಷರಾಗಿ ಆಲ್‌ಹಾಜ್ ಇಸ್ಹಾಖ್ ಬಾಖವಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಯು.ಸಂಶುದ್ದೀನ್, ಸಂಚಾಲಕರಾಗಿ ಅಬೂಬಕ್ಕರ್ ಪಾರೆಕ್ಕಲ್, ಉಪಾಧ್ಯಕ್ಷರಾಗಿ ಇಬ್ರಾಹಿಂ ಕುಕ್ಕುಂಬಳ, ಕೋಶಾಧಿಕಾರಿಯಾಗಿ ಮೊದು ಕುಕ್ಕುಂಬಳ ಆಯ್ಕೆಯಾದರು.


ಸದಸ್ಯರುಗಳಾಗಿ ಹಾಜಿ ಬದ್ರುದ್ದೀನ್ ಪಠೇಲ್, ಹಾಜಿ ಮಹಮ್ಮದ್, ಕೆ.ಎಂ.ಮುಸಾನ್, ಮನ್ಸೂರ್ ಪಾರೆಕ್ಕಲ್, ಮಜೀದ್ ಎಸ್.ಎಂ., ಹಾಜಿ ಅಜರುದ್ದೀನ್, ಸಂಶುದ್ದೀನ್, ಅಮೀರ್ ಕುಕ್ಕುಂಬಳ, ಹಮೀದ್ ಎ.ಎ., ಬಾತಿಶ ಕುಕ್ಕುಂಬಳ, ಅಬ್ದುಲ್ ಖಾದರ್ ಪಠೇಲ್, ಮುಜೀಬ್, ಜುಬೈರ್, ತಾಜುದ್ದೀನ್ ರವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮುಂದಿನ ವರ್ಷ ಸ್ವಲಾತ್ ಸಮಿತಿಯ ವತಿಯಿಂದ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಕುರಿತು ಚರ್ಚಿಸಲಾಯಿತು.