ಅಶ್ವಥ್ ಬಾಬ್ಲುಬೆಟ್ಟುರವರಿಗೆ ಜೇಸಿಐ ಉದ್ಯಮ ರತ್ನ ಪ್ರಶಸ್ತಿ ಪ್ರದಾನ

0

ಜೇಸಿಐ ಶಂಕರನಾರಾಯಣ ಆತಿಥ್ಯದಲ್ಲಿ ಹಾಲಾಡಿಯಲ್ಲಿ ಶ್ರೀಮತಿ ಶಾಲಿನಿ ಜಿ ಶಂಕರ್ ಕನ್ವೇಂನ್ಶನ್ ಸೆಂಟರ್ ನಲ್ಲಿ ನಡೆದ ಜೇಸಿಐ ಭಾರತ ವಲಯ 15ರ ಅಭಿವೃದ್ದಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಪಂಜ ಪಂಚಶ್ರೀ ಯ ಸದಸ್ಯ ಸಂಭ್ರಮ ಡೇಕೋರೇಷನ್ ಇದರ ಮಾಲಕ ಅಶ್ವಥ್ ಬಾಬ್ಲುಬೆಟ್ಟು ರವರಿಗೆ ಜೇಸಿಐ ಭಾರತ ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ರವರು “ಉದ್ಯಮ ರತ್ನ ಪ್ರಶಸ್ತಿ’ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ರೈ ,ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ ಪೂರ್ವಾಧ್ಯಕ್ಷ ಚೇತನ್ ತಂಟೆಪ್ಪಾಡಿ ಸದಸ್ಯರಾದ ಪ್ರಕಾಶ್ ಅಳ್ಪೆ, ಸುಬ್ರಹ್ಮಣ್ಯ ಕುದ್ಪಾಜೆ, ಕೌಶಿಕ್ ಕುಳ, ಗಗನ್ ಕಿನ್ನಿಕುಮೇರಿ ಪ್ರವೀಣ್ ಕುಂಜತ್ತಾಡಿ ಶ್ರೇಯಸ್ ತುಪ್ಪದಮನೆ ಉಪಸ್ಥಿತರಿದ್ದರು.