p>

ಚಟ್ಟೆಕಲ್ಲು ರಸ್ತೆ ಕಾಂಕ್ರಿಟೀಕರಣಕ್ಕೆ ಅನುದಾನ ಒದಗಿಸಿ ಕೊಡಲು ಸ್ಥಳೀಯ ನಿವಾಸಿಗಳಿಂದ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಮನವಿ.

0

ಕೆಪಿಸಿಸಿ ಮುಖ್ಯ ವಕ್ತಾರರು ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ರವರಿಗೆ ಸಂಪಾಜೆ ಗ್ರಾಮದ ಚಟ್ಟೆಕ್ಕಲ್ಲು ರಸ್ತೆ ಕಾಂಕ್ರಿಟೀಕರಣಕ್ಕಾಗಿ ಸರಕಾರದಿಂದ ಅನುದಾನ ಒದಗಿಸಿ ಕೊಡಲು ಸ್ಥಳೀಯ ನಿವಾಸಿಗಳ ನಿಯೋಗ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಚಟ್ಟೆಕ್ಕಲ್ಲು ನಿವಾಸಿಗಳಾದ ಅಬ್ದುಲ್ ಖಾದರ್ ಎಸ್ ಎ, ಹಸೈನಾರ್ ಎಸ್ ಎ, ಸುಂದರ ಯು ಟಿ, ಸಾದಿಕ್ ಮತ್ತು ಸಲೀಕ್ ರವರು ಉಪಸ್ಥಿತರಿದ್ದರು.