ಮುಳ್ಯ-ಅಟ್ಲೂರು ಶಾಲೆಗೆ ದಾನಿ ರವಿಪ್ರಕಾಶ್ ಅಟ್ಲೂರು – ಪದ್ಮಲತಾ ರವರು ಕೊಡುಗೆಯಾಗಿ ನೀಡಿದ ಕೊಠಡಿಗಳ ಉದ್ಘಾಟನೆ

0

ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಸಹಕಾರ : ಶಾಸಕಿ‌ ಭಾಗೀರಥಿ ಮುರುಳ್ಯ ಭರವಸೆ

ಅಜ್ಜಾವರ ಗ್ರಾಮದ ಮುಳ್ಯ – ಅಟ್ಲೂರು ಶಾಲೆಗೆ ದಾನಿ ರವಿಪ್ರಕಾಶ್ ಅಟ್ಲೂರು ಹಾಗೂ ಪದ್ಮಲತಾ ಅಟ್ಲೂರುರವರು ರೂ.16 ಲಕ್ಷ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿರುವ ಎರಡು ಕೊಠಡಿಗಳ ಉದ್ಘಾಟನಾ ಸಮಾರಂಭ ಆ.1 ರಂದು ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ನೂತನ ಕೊಠಡಿಯನ್ನು ಉದ್ಘಾಟಿಸಿ ಶುಭಹಾರೈಸಿದರು. “ನಾನು ಜಿ.ಪಂ. ಸದಸ್ಯೆಯಾಗಿದ್ದ ಸಂದರ್ಭ ಈ ಶಾಲೆಗೆ ಬಂದು ನಮ್ಮಿಂದಾದ ಕೊಡುಗೆ ನೀಡಿದ್ದೇವೆ. ಈ ಸಂಸ್ಥೆ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇಲ್ಲಿಯ ಅಭಿವೃದ್ಧಿಗೆ ನನ್ನ ಸಹಕಾರ ನೀಡುತ್ತೇನೆ ಎಂದು ಶುಭಹಾರೈಸಿದರು.

ಶಾಸಕರು ಬೆಳಗ್ಗೆ 8 ಗಂಟೆಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ, ತೆರಳಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶಿವರಾಮ ಕೇನಾಜೆ, ಎಸ್.ಡಿ.ಎಂ.ಸಿ ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು, ಪಂಚಾಯತ್ ಸದಸ್ಯರು, ಊರ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.